ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಗೆ ಕೀರ್ತಿ ತಂದ ತಹಸಿನ್ ಬಾನು: UPSC ಪರೀಕ್ಷೆಯಲ್ಲಿ 482ನೇ ರ್‍ಯಾಂಕ್ - Tehsin Banu from Hubli who passed upsc in frist attemt

ರೈಲ್ವೆ ಗಾರ್ಡ್ ಮಗಳು UPSC ಪರೀಕ್ಷೆಯಲ್ಲಿ 482ನೇ ರ್‍ಯಾಂಕ್​ ಪಡೆದು ಹುಬ್ಬಳ್ಳಿ-ಧಾರವಾಡಕ್ಕೆ ಕೀರ್ತಿ ತಂದಿದ್ದಾಳೆ. ಮೊದಲ ಪ್ರಯತ್ನದಲ್ಲೇ ಹುಬ್ಬಳ್ಳಿಯ ತಹಸಿನ್ ಬಾನು ದವಡಿ ಲೋಕಸೇವಾ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ.

Tehsin Banu from Hubli who passed upsc
ಹುಬ್ಬಳ್ಳಿಗೆ ಕೀರ್ತಿ ತಂದ ತಹಸಿನ್ ಬಾನು

By

Published : Jun 1, 2022, 9:58 PM IST

ಹುಬ್ಬಳ್ಳಿ:ಕೇಂದ್ರೀಯ ಲೋಕಸೇವಾ ಆಯೋಗ ನಡೆಸುವ ದೇಶದ ಅತ್ಯುನ್ನತ ನಾಗರೀಕ ಸೇವೆಗಳ ನೇಮಕಕ್ಕೆ 2021ನೇ ಸಾಲಿನ ಫಲಿತಾಂಶ ಸೋಮವಾರ ಪ್ರಕಟವಾಗಿತ್ತು. ಹುಬ್ಬಳ್ಳಿಯ ತಹಸಿನ್ ಬಾನು ದವಡಿ ಮೊದಲ ಪ್ರಯತ್ನದಲ್ಲೇ ಪರೀಕ್ಷೆಯನ್ನು ಪಾಸ್​ ಮಾಡುವ ಮೂಲಕ, 482ನೇ ರ್‍ಯಾಂಕ್ ಪಡೆದು ಉತ್ತೀರ್ಣರಾಗಿದ್ದಾರೆ. ಹುಬ್ಬಳ್ಳಿ ನಗರದ ಖಾದರ್ ಬಾಷಾ ಹಾಗೂ ಹಸೀನ ಬೇಗಂ ದಂಪತಿಯ ಪುತ್ರಿ ತಹಸಿನ್ ಬಾನು ಯುಪಿಎಸ್​​ಸಿಯಲ್ಲಿ ಉತ್ತೀರ್ಣರಾಗಿರುವ ರಾಜ್ಯದ ಏಕೈಕ ಮುಸ್ಲಿಂ ಯುವತಿಯಾಗಿದ್ದಾರೆ.

ಹುಬ್ಬಳ್ಳಿಗೆ ಕೀರ್ತಿ ತಂದ ತಹಸಿನ್ ಬಾನು

ಪ್ರಾಥಮಿಕ ಶಿಕ್ಷಣದದಿಂದ ಪಿಯುಸಿವರೆಗೆ ಹುಬ್ಬಳ್ಳಿ ನಗರದಲ್ಲೇ ವ್ಯಾಸಂಗ ಮಾಡಿರುವ ಬಾನು, ಬಳಿಕ ಧಾರವಾಡ ಕೃಷಿ ವಿವಿಯಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ. ಮಗಳ ಸಾಧನೆ ಬಗ್ಗೆ ಪೋಷಕರು ಹಾಗೂ ಕುಟುಂಬಸ್ಥರು ಸಂತಸಗೊಂಡಿದ್ದಾರೆ. ಇವರ ತಂದೆ ನೈರುತ್ಯ ರೈಲ್ವೆ ಇಲಾಖೆಯಲ್ಲಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ.

ಕರ್ನಾಟಕದ ಏಕೈಕ ಮುಸ್ಲಿಂ ವಿದ್ಯಾರ್ಥಿ:ಹುಬ್ಬಳ್ಳಿಯ ತಹಸಿನ್ ಬಾನು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕರ್ನಾಟಕ ಏಕೈಕ ಮತ್ತು ದೇಶದ 21ನೇ ಮುಸ್ಲಿಂ ವಿದ್ಯಾರ್ಥಿ ಆಗಿದ್ದಾರೆ. ಇದು 2010ರ ಬಳಿಕ ಮುಸ್ಲಿಂ ವಿದ್ಯಾರ್ಥಿಗಳ ಅತ್ಯಂತ ಕಳಪೆ ಸಾಧನೆಯಾಗಿದೆ. 2020ರ ಸಾಲಿನಲ್ಲಿ 68 ಜನ ಸಂದರ್ಶನದವರೆಗೆ ಹೋಗಿದ್ದು, 25 ಮುಸ್ಲಿಂ ವಿದ್ಯಾರ್ಥಿಗಳು ನಾಗರೀಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಜನರ ಸೇವೆ ಮಾಡಬೇಕೆಂಬ ಉದ್ದೇಶದಿಂದ ಯುಪಿಎಸ್ಸಿ ಬರೆದಿದ್ದೆ, ಇದೀಗ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ಬಾನು ಹೇಳುತ್ತಾರೆ.

ಇದನ್ನೂ ಓದಿ:ರಾಜ್​​ಕುಮಾರ್ ಸಿವಿಲ್ ಸರ್ವಿಸ್​​ ಅಕಾಡೆಮಿಯಲ್ಲಿ ಅಭ್ಯಸಿಸಿ UPSCಯಲ್ಲಿ ಪಾಸ್​ : ಮೆಚ್ಚುಗೆ ವ್ಯಕ್ತಪಡಿಸಿದ ನಟ ರಾಘಣ್ಣ

ABOUT THE AUTHOR

...view details