ಹುಬ್ಬಳ್ಳಿ:ಶಿಕ್ಷಕರ ಕಡ್ಡಾಯ ವರ್ಗಾವಣೆ ನೀತಿ ವಿರೋಧಿಸಿ ನೂರಾರು ಶಿಕ್ಷಕರು ನಗರದ ದೇಸಾಯಿ ಕ್ರಾಸ್ನಲ್ಲಿರುವ ಮಾಜಿ ಸಚಿವ ಬಸವರಾಜ ಹೊರಟ್ಟಿ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಬಸವರಾಜ ಹೊರಟ್ಟಿ ಮನೆಗೆ ಶಿಕ್ಷಕರ ಮುತ್ತಿಗೆ.. ಕಡ್ಡಾಯ ವರ್ಗಾವಣೆ ನೀತಿ ಕೈಬಿಡಲು ಒತ್ತಾಯ
ಈಗಾಗಲೇ 10 -15 ವರ್ಷ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಿದ ಶಿಕ್ಷಕರಿಗೆ ಪುನಃ ವರ್ಗಾವಣೆ ಹಾಗೂ ಕಡ್ಡಾಯ ವರ್ಗಾವಣೆ ನ್ಯಾಯ ಸಮ್ಮತವಾಗಿಲ್ಲ. ಕೂಡಲೇ ಸರ್ಕಾರ ನ್ಯಾಯ ಸಮ್ಮತ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ಬಸವರಾಜ ಹೊರಟ್ಟಿ ಮನೆಗೆ ಶಿಕ್ಷಕರ ಮುತ್ತಿಗೆ
ಈಗಾಗಲೇ 10-15 ವರ್ಷ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಿದ ಶಿಕ್ಷಕರಿಗೆ ಪುನಃ ವರ್ಗಾವಣೆ ಹಾಗೂ ಕಡ್ಡಾಯ ವರ್ಗಾವಣೆ ನ್ಯಾಯ ಸಮ್ಮತವಾಗಿಲ್ಲ. ಕೂಡಲೇ ಸರ್ಕಾರ ನ್ಯಾಯ ಸಮ್ಮತ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ಶಿಕ್ಷಕರ ಮನವಿಗೆ ಸ್ಪಂದಿಸಿದ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ, ಸರ್ಕಾರದ ಗಮನಕ್ಕೆ ತಂದು ಮಾರ್ಪಾಡು ಮಾಡಲು ಸೂಚಿಸುವುದಾಗಿ ಭರವಸೆ ನೀಡಿದರು.