ಕರ್ನಾಟಕ

karnataka

By

Published : Mar 14, 2022, 9:36 AM IST

ETV Bharat / state

ಬೆಲ್ಲದಗೆ ಮುಂದೊಂದು ದಿನ ಸಿಎಂ ಸ್ಥಾನ ತಾನಾಗಿಯೇ ಒಲಿದು ಬರಲಿದೆ: ಸುಡುಗಾಡು ಸಿದ್ದರ ಭವಿಷ್ಯ

ಶಾಸಕ ಅರವಿಂದ ಬೆಲ್ಲದ ಅವರನ್ನು ಹಾಡಿ ಹೊಗಳಿದ ಸುಡುಗಾಡು ಸಿದ್ದರ ಸಂಘದ ಅಧ್ಯಕ್ಷ ಲಕ್ಷ್ಮಣ ಭವಿಷ್ಯ‌ ನುಡಿದಿದ್ದಾರೆ.

Sudugadu Sidda community leader prediction
ಭವಿಷ್ಯ ನುಡಿದ ಸುಡುಗಾಡು ಸಿದ್ದರ ಸಂಘದ ಅಧ್ಯಕ್ಷ ಲಕ್ಷ್ಮಣ

ಧಾರವಾಡ: ಶಾಸಕ‌ ಅರವಿಂದ‌ ಬೆಲ್ಲದ ಇದೇ ಸರ್ಕಾರದಲ್ಲಿ ಸಚಿವರಾಗ್ತಾರೆ. ಮುಂದೊಂದು ಒಂದು ದಿನ ಅವರಿಗೆ ಮುಖ್ಯಮಂತ್ರಿ ಸ್ಥಾನ ತಾನಾಗಿಯೇ ಒಲಿದು ಬರಲಿದೆ ಎಂದು ಅಖಿಲ ಕರ್ನಾಟಕ ಸುಡುಗಾಡು ಸಿದ್ದರ ಸಂಘದ ಅಧ್ಯಕ್ಷ ಲಕ್ಷ್ಮಣ ಭವಿಷ್ಯ ನುಡಿದಿದ್ದಾರೆ.

ಭವಿಷ್ಯ ನುಡಿದ ಸುಡುಗಾಡು ಸಿದ್ದರ ಸಂಘದ ಅಧ್ಯಕ್ಷ ಲಕ್ಷ್ಮಣ

ಕಳೆದ ರಾತ್ರಿ ಕೆಲಗೇರಿಯಲ್ಲಿ ನಡೆದ ಸಭೆಯೊಂದರಲ್ಲಿ ಅವರು ಶಾಸಕ ಬೆಲ್ಲದ ಅವರನ್ನು ಹಾಡಿ ಹೊಗಳಿದ್ದಾರೆ. ಮುಖ್ಯಮಂತ್ರಿ ಸ್ಥಾನ ತಾನಾಗಿ ಬರುವ ಯೋಗ ಇದೆ. ಶಾಸಕ ಅರವಿಂದ ಬೆಲ್ಲದ ಅವರನ್ನು ಜನರು ದೇವರಿಗೆ ಹೋಲಿಸಿದ್ದಾರೆ. ಇವರು ಭಗವಂತ, ಪಾಂಡುರಂಗ ಇದ್ದಂತೆ. ಕ್ಷೇತ್ರದ ಜನರಿಗಾಗಿ ಹಗಲಿರುಳು ದುಡಿಯುತ್ತಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಕೇಂದ್ರದಲ್ಲಿ ಇವರು ಒಳ್ಳೆಯ ಹೆಸರು ಮಾಡಿದ್ದಾರೆ. ಪಶ್ಚಿಮ ಕ್ಷೇತ್ರದ, ನೆಹರು ನಗರ, ಕೆಲಗೇರಿ, ತೇಜಸ್ವಿ ನಗರ, ರಾಜೀವ್ ಗಾಂಧಿನಗರ, ಎಲ್ಲ ಕಡೆ ಉತ್ತಮ ಕೆಲಸ ಮಾಡಿದ್ದಾರೆ. ಮತದಾರರು ಚುನಾವಣೆಯಲ್ಲಿ ಮತದಾನ ನೀಡುವ ಮೂಲಕ ಇವರ ಋಣ ತೀರಿಸಿಕೊಳ್ಳಿ ಎಂದು ಕರೆ ನೀಡಿದರು.

ಇದನ್ನೂ ಓದಿ:ಬೊಮ್ಮಾಯಿ, ಕಟೀಲ್ ನೇತೃತ್ವದಲ್ಲಿ ಚುನಾವಣಾ ನೀತಿ ರೂಪಿಸಿ ಗೆಲ್ಲುತ್ತೇವೆ: ಪ್ರಹ್ಲಾದ್ ಜೋಶಿ

ABOUT THE AUTHOR

...view details