ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ: ಶಾಸಕರ ಸಹೋದರನ ಪುತ್ರನ ಕಾರಿನ ಮೇಲೆ ಕಲ್ಲು ತೂರಾಟ - ಹುಬ್ಬಳ್ಳಿಯಲ್ಲಿ ಶಾಸಕರ ಸಹೋದರನ ಪುತ್ರನ ಕಾರಿನ ಮೇಲೆ ಕಲ್ಲು ತೂರಾಟ

ಕಲಘಟಗಿ ಶಾಸಕ ಸಿ.ಎಂ. ನಿಂಬಣ್ಣನವರ್ ಸಹೋದರನ‌ ಪುತ್ರ ನಾಗರಾಜ್ ನಿಂಬಣ್ಣನವರ್ ಕಾರಿನ ಮೇಲೆ ಸಂಬಂಧಿಗಳು ಕಲ್ಲು ತೂರಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

stone-thrown-on-mla-brother-sons-car-in-hubli
ಶಾಸಕರ ಸಹೋದರನ ಪುತ್ರನ ಕಾರಿನ ಮೇಲೆ ಕಲ್ಲು ತೂರಾಟ

By

Published : Jan 4, 2021, 10:24 AM IST

ಹುಬ್ಬಳ್ಳಿ:ಆಸ್ತಿ ವಿವಾದ ಹಿನ್ನೆಲೆಯಲ್ಲಿ ಶಾಸಕರ ಸಹೋದರನ ಪುತ್ರನ ಕಾರಿನ ಮೇಲೆ ಸಹೋದರ ಸಂಬಂಧಿಗಳೇ ಕಲ್ಲು ತೂರಾಟ ಮಾಡಿರುವ ಘಟನೆ ಕಲಘಟಗಿ ತಾಲೂಕಿನ ಸಂಗೆದೇವರಕೊಪ್ಪ ಗ್ರಾಮದಲ್ಲಿ ನಡೆದಿದೆ.

ಕಲಘಟಗಿ ಶಾಸಕ ಸಿ.ಎಂ. ನಿಂಬಣ್ಣನವರ್ ಸಹೋದರನ‌ ಪುತ್ರ ನಾಗರಾಜ್ ನಿಂಬಣ್ಣನವರ್ ಕಾರಿನ ಮೇಲೆ ಸಂಬಂಧಿಗಳು ಕಲ್ಲು ತೂರಿ ಹಲ್ಲೆಗೆ ಯತ್ನಿಸಿದ್ದಾರೆ. ನಾಗರಾಜ್ ಅವರು ಸಂಗೆದೇವರಕೊಪ್ಪ ಹೊಲದಿಂದ ಮನೆಗೆ ಹಿಂದಿರುಗಿ ಬರುವಾಗ ಕಾರಿಗೆ ಅಡ್ಡಗಟ್ಟಿ ಕಲ್ಲಿನಿಂದ ಕಾರಿನ ಗ್ಲಾಸ್ ಒಡೆದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ರಾಜಧಾನಿ ಎಕ್ಸ್​ಪ್ರೆಸ್​ನಲ್ಲಿ ಕಾಣಿಸಿಕೊಂಡ ಬೆಂಕಿ

ನಾಗರಾಜ್ ಅವರಿಗೆ ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ಈ‌ ಕುರಿತು ಸಂಬಂಧಿಕರಾದ ಶಂಕ್ರಪ್ಪ ಹನುಮಂತಪ್ಪ ನಿಂಬಣ್ಣನವರ್, ಮಹಾಂತೇಶ ಹನುಮಂತಪ್ಪ ‌ನಿಂಬಣ್ಣನವರ್ ಹಾಗೂ ಸಂಗಮೇಶ ಹನುಮಂತಪ್ಪ ನಿಂಬಣ್ಣನವರ್ ಮೇಲೆ ದೂರು ದಾಖಲಾಗಿದೆ. ಕಲಘಟಗಿ ಸಿಪಿಐ ವಿಜಯ ಬಿರಾದಾರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details