ಕರ್ನಾಟಕ

karnataka

ETV Bharat / state

ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನ ಬಾಹಿರ: ಎಸ್.ಆರ್.ಹಿರೇಮಠ - sr hiremat reation on Citizenship Amendment bill

ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನಕ್ಕೆ ವಿರುದ್ಧವಾದುದು ಎಂದು ಸಮಾಜ‌ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

hirematt
ಎಸ್ ಆರ್ ಹಿರೇಮಠ ಸುದ್ದಿಗೋಷ್ಟಿ

By

Published : Dec 14, 2019, 2:52 PM IST

ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನ ವಿರೋಧಿಯಾಗಿದ್ದು, ದೇಶದಾದ್ಯಂತ ವಿಸ್ತರಿಸಲು ಸಂಸತ್ತಿನಲ್ಲಿ ಬಿಲ್ ಪಾಸ್ ಮಾಡಿದ್ದು ಖಂಡನೀಯ ಎಂದು ಸಮಾಜ‌ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​​ಆರ್​​​ಸಿ)ಯು ಮಹಾತ್ಮಾ ಗಾಂಧಿ, ಡಾ. ಬಿ.ಆರ್.ಅಂಬೇಡ್ಕರ್ ಅವರ ಆಶಯಕ್ಕೆ ವಿರೋಧಿಯಾಗಿದೆ. ಆದರೆ ಇದನ್ನು ಬಿಜೆಪಿ ಹಾಗೂ ಸಂಘ ಪರಿವಾರ ತಿದ್ದುಪಡಿ ಮಾಡಿ ಕಾಯ್ದೆ ಜಾರಿಗೆ ತರುವ ಮೂಲಕ ಸಂವಿಧಾನಕ್ಕೆ ಕೊಡಲಿ ಪೆಟ್ಟು ಕೊಟ್ಟಿದ್ದಾರೆ ಎಂದು ದೂರಿದರು. ಇನ್ನು ಈ ಕಾಯ್ದೆಯು ಜನರು ಮಾನವೀಯ ಮೌಲ್ಯ, ಸರ್ವ ಜನರು ಭಾತೃತ್ವದಲ್ಲಿ ಇರಬೇಕು ಎಂಬ ಅಶಯಗಳಿಗೆ ತಿಲಾಂಜಲಿ ಹಾಡುವ ಜೊತೆಗೆ ರಾಷ್ಟ್ರದಲ್ಲಿ ಆದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಹೊಸಕಿ ಹಾಕುವ ಪ್ರಯತ್ನ ಆಗಿದೆ. ಕೂಡಲೇ ರಾಷ್ಟ್ರದ ಎಲ್ಲ ಜನರು ಕ್ವಿಟ್ ಇಂಡಿಯಾ ಚಳುವಳಿ ಹೋರಾಟದಂತೆ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ವಿರೋಧ ಮಾಡಬೇಕು ಎಂದರು.

ಎಸ್.ಆರ್.ಹಿರೇಮಠ ಸುದ್ದಿಗೋಷ್ಠಿ

ಉಪ ಲೋಕಾಯುಕ್ತರ ಆಯ್ಕೆ ಪ್ರಶ್ನಾರ್ಹ:

ಉಪ ಲೋಕಾಯುಕ್ತ ಹುದ್ದೆಗೆ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರನ್ನು ನೇಮಕ ಮಾಡಿರುವುದು ನಿಯಮಗಳ ಉಲ್ಲಂಘನೆಯಾಗಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಆಯ್ಕೆಯನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹಾಕಲಾಗಿದೆ. ನ್ಯಾಯಾಲಯ ಕೂಡಾ ನಾಲ್ಕು ರೆಸ್ಪೊಂಡೆಂಟ್​​ಗಳಿಗೆ ನೋಟಿಸ್ ಜಾರಿ ಮಾಡಿದೆ. ಇದು ಸ್ವಾಗತರ್ಹವಾಗಿದೆ ಎಂದರು.

ಬೆನಗನಹಳ್ಳಿಯಲ್ಲಿನ 4 ಎಕರೆ 20 ಗುಂಟೆ ಭೂಮಿ ಡಿನೋಟಿಪೀಕೇಶನ್ ಪ್ರಕರಣ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠದ ಎದುರಿಗೆ ಬಂದಿದೆ. ಈ‌ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್​​​ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ವಿಚಾರಣೆ 2020 ಜ. 7ರಂದು ನಡೆಯಲಿದ್ದು, ಇದನ್ನು ಸಮಾಜ ಪರಿವರ್ತನ ಸಮುದಾಯ ಸ್ವಾಗತಿಸುವುದು ಎಂದರು.

For All Latest Updates

TAGGED:

ABOUT THE AUTHOR

...view details