ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ಬಸ್​​ ನಿಲ್ದಾಣದಲ್ಲಿ ಉಗುಳಿದವರಿಂದ 30 ಸಾವಿರ ರೂಪಾಯಿಗೂ ಅಧಿಕ ದಂಡ ವಸೂಲಿ - ಬಸ್​​ ನಿಲ್ದಾಣದಲ್ಲಿ ಉಗುಳಿದವರಿಂದ ದಂಡ ವಸೂಲಿ ಮಾಡಿದ ಸಾರಿಗೆ

ಬಸ್ ಟಿಕೆಟ್​​​ನಲ್ಲಿ ಸಂದೇಶಗಳನ್ನು ಮುದ್ರಿಸಲಾಗುತ್ತಿದೆ. ಈ ಬಗ್ಗೆ ನಿಲ್ದಾಣದ ಮೇಲ್ವಿಚಾರಕ ಸಿಬ್ಬಂದಿ ಸಹಾ ಮೌಖಿಕ ತಿಳುವಳಿಕೆ ನೀಡುತ್ತಾರೆ. ಇವೆಲ್ಲವುಗಳನ್ನು ನಿರ್ಲಕ್ಷಿಸಿ ಬಸ್ ಮತ್ತು ನಿಲ್ದಾಣದಲ್ಲಿ ಉಗುಳುವವರಿಗೆ ಸ್ಥಳದಲ್ಲಿಯೇ ದಂಡ ವಿಧಿಸಲಾಗುತ್ತಿದೆ..

Northwest Karnataka Road Transport
ಹುಬ್ಬಳ್ಳಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ

By

Published : Sep 13, 2021, 7:49 PM IST

ಹುಬ್ಬಳ್ಳಿ :ಬಸ್ ನಿಲ್ದಾಣಗಳಲ್ಲಿ ಎಲೆ-ಅಡಿಕೆ, ತಂಬಾಕು ಹಾಗೂ ಗುಟ್ಕಾ ತಿಂದು ಉಗುಳುವವರಿಗೆ ಸ್ಥಳದಲ್ಲಿಯೇ ದಂಡ ವಿಧಿಸುವ ಮೂಲಕ ಜಾಗೃತಿ ಮೂಡಿಸಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮುಂದಾಗಿದೆ.

ಸರ್ಕಾರದ ನಿರ್ದೇಶನದ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಎಲೆ-ಅಡಿಕೆ, ತಂಬಾಕು, ಗುಟ್ಕಾ ಸೇವನೆ ಹಾಗೂ ಧೂಮಪಾನ ನಿಷೇಧಿಸಲಾಗಿದೆ.

ಬಸ್ ಮತ್ತು ನಿಲ್ದಾಣಗಳಲ್ಲಿ ಇದನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಹಲವಾರು ಉಪ ಕ್ರಮಗಳನ್ನು ಜಾರಿಗೊಳಿಗಸಲಾಗಿದೆ. ಎಲ್ಲಾ ರೀತಿಯ ಜಾಗೃತಿ, ಮುನ್ನೆಚ್ಚರಿಕಾ ಕ್ರಮಗಳ ಹೊರತಾಗಿಯೂ ಬಸ್ ಮತ್ತು ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಉಗುಳುವವರಿಗೆ ಸ್ಥಳದಲ್ಲಿಯೇ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಲಾಗುತ್ತಿದೆ.

30 ಸಾವಿರಕ್ಕೂ ಅಧಿಕ ದಂಡ ವಸೂಲಿ :ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವ್ಯಾಪ್ತಿಯ ಬಸ್ ನಿಲ್ದಾಣಗಳಲ್ಲಿ ಜುಲೈ ತಿಂಗಳಲ್ಲಿ 10,600 ರೂ., ಆಗಸ್ಟ್​​​​ನಲ್ಲಿ 15,800 ರೂ. ಹಾಗೂ ಸೆಪ್ಟೆಂಬರ್​ ಮೊದಲ ವಾರದಲ್ಲಿ ರೂ.4,200 ಸೇರಿದಂತೆ ಒಟ್ಟು 30 ಸಾವಿರಕ್ಕೂ ಅಧಿಕ ಮೊತ್ತದ ದಂಡ ವಸೂಲಿ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್ ರಾಮನಗೌಡರ ತಿಳಿಸಿದ್ದಾರೆ.

ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ 375 ಬಸ್​​​ಗಳಲ್ಲಿ ಪ್ರತಿದಿನ ಒಂದು ಲಕ್ಷಕ್ಕೂ ಅಧಿಕ ಜನ ಪ್ರಯಾಣ ಮಾಡುತ್ತಾರೆ. ನಗರದ ಹೊಸೂರು, ಗೋಕುಲ ರಸ್ತೆ ಬಸ್ ನಿಲ್ದಾಣ, ತಡಸ, ಕಲಘಟಗಿ, ಕುಂದಗೋಳ, ನವಲಗುಂದ ಹಾಗೂ ಅಣ್ಣಿಗೇರಿ ಮತ್ತಿತರ ಪ್ರಮುಖ ಬಸ್ ನಿಲ್ದಾಣಗಳಿಗೆ ನಿತ್ಯ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ.

ಕೆಲವರಿಗೆ ಎಲ್ಲೆಂದರಲ್ಲಿ ಉಗುಳುವ ಹವ್ಯಾಸ ಇರುತ್ತದೆ. ಇದರಿಂದ ಪರಿಸರಕ್ಕೆ ಹಾನಿ, ಅಕ್ಕಪಕ್ಕದವರಿಗೆ ಮುಜುಗರ ಮತ್ತು ಕೋವಿಡ್ ನಂತಹ ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಕಾರಣವಾಗುವ ಸಾಧ್ಯತೆ ಇರುತ್ತದೆ.

ಹುಬ್ಬಳ್ಳಿ ಸಾರಿಗೆ ಇಲಾಖೆಯಿಂದ ಜಾಗೃತಿ

ಸಾರ್ವಜನಿಕರಲ್ಲಿ ಜಾಗೃತಿ :ಬಸ್ ಮತ್ತು ನಿಲ್ದಾಣದಲ್ಲಿ ಎಲೆ ಅಡಿಕೆ, ತಂಬಾಕು, ಗುಟ್ಕಾ ಸೇವನೆ, ಧೂಮಪಾನ ನಿಷೇಧದ ಕುರಿತು ಸಾರ್ವಜನಿಕರ ಮಾಹಿತಿಗಾಗಿ ಬಸ್ ಮತ್ತು ನಿಲ್ದಾಣಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಧ್ವನಿವರ್ಧಕದ ಮೂಲಕ ಜಾಗೃತಿ ಸಂದೇಶ ಬಿತ್ತರಿಸಲಾಗುತ್ತಿದೆ.

ಬಸ್ ಟಿಕೆಟ್​​​ನಲ್ಲಿ ಸಂದೇಶಗಳನ್ನು ಮುದ್ರಿಸಲಾಗುತ್ತಿದೆ. ಈ ಬಗ್ಗೆ ನಿಲ್ದಾಣದ ಮೇಲ್ವಿಚಾರಕ ಸಿಬ್ಬಂದಿ ಸಹಾ ಮೌಖಿಕ ತಿಳುವಳಿಕೆ ನೀಡುತ್ತಾರೆ. ಇವೆಲ್ಲವುಗಳನ್ನು ನಿರ್ಲಕ್ಷಿಸಿ ಬಸ್ ಮತ್ತು ನಿಲ್ದಾಣದಲ್ಲಿ ಉಗುಳುವವರಿಗೆ ಸ್ಥಳದಲ್ಲಿಯೇ ದಂಡ ವಿಧಿಸಲಾಗುತ್ತಿದೆ.

ಇದನ್ನೂ ಓದಿ: ರಾಜ್ಯದಲ್ಲಿಂದು ಕೊರೊನಾ ಸೋಂಕು ಭಾರಿ ಇಳಿಕೆ : 673 ಮಂದಿಗೆ ಕೋವಿಡ್,13 ಸೋಂಕಿತರ ಸಾವು

ABOUT THE AUTHOR

...view details