ಕರ್ನಾಟಕ

karnataka

ETV Bharat / state

ಮಾರ್ಚ್ 10 ರಿಂದ ಬೆಂಗಳೂರಿನಿಂದ ಹುಬ್ಬಳ್ಳಿ, ಹೊಸಪೇಟೆಗೆ ವಿಶೇಷ ರೈಲು ಸೇವೆ ಆರಂಭ - ಬೆಂಗಳೂರಿನಿಂದ ಹುಬ್ಬಳ್ಳಿ, ಹೊಸಪೇಟೆಗೆ ವಿಶೇಷ ರೈಲು ಸೇವೆ ಆರಂಭ

ಮಾರ್ಚ್​ 11ರಂದು ಬೆಳಗ್ಗೆ 5 ಗಂಟೆಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಹೊರಡುವ ರೈಲು ಮಧ್ಯಾಹ್ನ 3.45ಕ್ಕೆ ಹೊಸಪೇಟೆಗೆ ತಲುಪಲಿದೆ. ಮಾ.12ರಂದು ಮಧ್ಯಾಹ್ನ 12.10ಕ್ಕೆ ಹೊಸಪೇಟೆಯಿಂದ ಹೊರಡುವ ರೈಲು ಬೆಂಗಳೂರಿಗೆ ರಾತ್ರಿ 10.45ಕ್ಕೆ ತಲುಪಲಿದೆ. ನಂತರ ಪ್ರತಿದಿನ ರೈಲು ಸಂಚರಿಸಲಿವೆ ಎಂದು ಪ್ರಕಟಣೆ ತಿಳಿಸಿದೆ.

Special train from Bangalore to Hubli From March 10th
ಬೆಂಗಳೂರಿನಿಂದ ಹುಬ್ಬಳ್ಳಿ, ಹೊಸಪೇಟೆಗೆ ವಿಶೇಷ ರೈಲು ಸೇವೆ ಆರಂಭ

By

Published : Mar 8, 2021, 8:59 AM IST

Updated : Mar 8, 2021, 9:50 AM IST

ಹುಬ್ಬಳ್ಳಿ: ಸಾರ್ವಜನಿಕರ ಸೌಲಭ್ಯಕ್ಕಾಗಿ ಇದೇ ತಿಂಗಳ 10 ರಿಂದ ಹುಬ್ಬಳ್ಳಿ- ಬೆಂಗಳೂರು ಹಾಗೂ 11ರಿಂದ ಬೆಂಗಳೂರು - ಹೊಸಪೇಟೆಗೆ ನಿತ್ಯ ಸಾಮಾನ್ಯ ದರದಲ್ಲಿ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನ ನೈರುತ್ಯ ರೈಲ್ವೆ ಆರಂಭಿಸಲಿದೆ.

ಮಾರ್ಚ್​ 10 ರಂದು ಸಂಜೆ 6 ಗಂಟೆಗೆ ಹುಬ್ಬಳ್ಳಿಯಿಂದ ಹೊರಡುವ ರೈಲು ಮರುದಿನ ಬೆಳಗ್ಗೆ 4 ಕ್ಕೆ ಬೆಂಗಳೂರು ತಲುಪಲಿದೆ. ಮಾರ್ಚ್​ 12 ರಂದು ಬೆಂಗಳೂರಿನಿಂದ ರಾತ್ರಿ 11.55ಕ್ಕೆ ಹೊರಡುವ ರೈಲು ಹುಬ್ಬಳ್ಳಿಗೆ ಮರುದಿನ ಬೆಳಗ್ಗೆ 10 ಗಂಟೆಗೆ ತಲುಪಿದೆ. ನಂತರ ಪ್ರತಿದಿನ ಇದೇ ಸಮಯಕ್ಕೆ ರೈಲು ಸಂಚರಿಸಲಿವೆ.

ಬೆಂಗಳೂರಿನಿಂದ ಹುಬ್ಬಳ್ಳಿ, ಹೊಸಪೇಟೆಗೆ ವಿಶೇಷ ರೈಲು ಸೇವೆ ಆರಂಭ

ಮಾರ್ಚ್​ 11ರಂದು ಬೆಳಗ್ಗೆ 5 ಗಂಟೆಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಹೊರಡುವ ರೈಲು ಮಧ್ಯಾಹ್ನ 3.45ಕ್ಕೆ ಹೊಸಪೇಟೆಗೆ ತಲುಪಲಿದೆ. ಮಾ.12ರಂದು ಮಧ್ಯಾಹ್ನ 12.10ಕ್ಕೆ ಹೊಸಪೇಟೆಯಿಂದ ಹೊರಡುವ ರೈಲು ಬೆಂಗಳೂರಿಗೆ ರಾತ್ರಿ 10.45ಕ್ಕೆ ತಲುಪಲಿದೆ. ನಂತರ ಪ್ರತಿದಿನ ರೈಲು ಸಂಚರಿಸಲಿವೆ ಎಂದು ಪ್ರಕಟಣೆ ತಿಳಿಸಿದೆ.

ಓದಿ : 'ಕಾಲನ್ನೇ ಕೈಗಳನ್ನಾಗಿಸಿ' ಸಾಧನೆ ಮಾಡಿದ ಸಬಿತಾ ಮೋನಿಸ್‌ಗೆ ರಾಷ್ಟ್ರೀಯ ಮಹಿಳಾ ಸಾಧಕಿ ಪ್ರಶಸ್ತಿ ಗರಿ

ಮಾರ್ಚ್11ರಿಂದ ಹೊಸಪೇಟೆ – ಹರಿಹರ ನಡುವೆ ರೈಲು ಸಂಚಾರ ಆರಂಭ : ನೈರುತ್ಯ ರೈಲ್ವೆಯು ಹೊಸಪೇಟೆ - ಹರಿಹರ ನಡುವೆ ನಿತ್ಯ ವಿಶೇಷ ಎಕ್ಸ್‌ಪ್ರೆಸ್‌ ರೈಲಿನ ಸಂಚಾರ ಆರಂಭಿಸಲಿದೆ.

ಮಾರ್ಚ್ 11ರಿಂದ ಮುಂದಿನ ಆದೇಶದ ತನಕ ಹೊಸಪೇಟೆಯಿಂದ ಸಂಜೆ 4 ಗಂಟೆಗೆ ಹೊರಡುವ ರೈಲು ರಾತ್ರಿ 9.15ಕ್ಕೆ ಹರಿಹರ ತಲುಪಲಿದೆ. ಈ ರೈಲು ತುಂಗಭದ್ರಾ ಡ್ಯಾಂ, ವ್ಯಾಸನಕೇರಿ, ವ್ಯಾಸ ಕಾಲೋನಿ, ಮರಿಯಮ್ಮನಹಳ್ಳಿ, ಹಂಪಾಪಟ್ಟಣ, ಹಗರಿಬೊಮ್ಮನಹಳ್ಳಿ, ಮಳವಿ, ಕೊಟ್ಟೂರು, ಬೆಣ್ಣೆಹಳ್ಳಿ, ಹರಪನಹಳ್ಳಿ, ತೆಲಿಗಿ, ಅಮರಾವತಿ ಕಾಲೊನಿ, ದಾವಣಗೆರೆ, ತೋಳಹುಣಸೆ, ದಾವಣಗೆರೆ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಮಾರ್ಚ್​ 12ರಿಂದ ಹರಿಹರದಿಂದ ಬೆಳಗ್ಗೆ 6 ಗಂಟೆಗೆ ಹೊರಡುವ ರೈಲು 11.45ಕ್ಕೆ ಹೊಸಪೇಟೆಗೆ ಬರಲಿದೆ. ಈ ರೈಲುಗಳಿಗೆ ಸೀಟು ಕಾಯ್ದಿರಿಸಬೇಕಾದ ಅಗತ್ಯವಿಲ್ಲ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Last Updated : Mar 8, 2021, 9:50 AM IST

For All Latest Updates

ABOUT THE AUTHOR

...view details