ಕರ್ನಾಟಕ

karnataka

ETV Bharat / state

ಬಿಎಸ್​ವೈ ಮಾತಾಡೋ ಹುಲಿ ಅಲ್ಲ, ಬೇಟೆ ಆಡೋ ಹುಲಿ: ಶಂಕರ ಪಾಟೀಲ್ - ಮಲಪ್ರಭಾ ಮುಖ್ಯ ಕಾಲುವೆ ಹಾಗೂ ಲ್ಯಾಟರಲ್ ಗಳ ಎರಡನೇ ಹಂತದ ಆಧುನೀಕರಣ ಕಾಮಗಾರಿ

ಇದು ಕೇವಲ ಘರ್ಜಿಸುವ ಹುಲಿ ಅಲ್ಲ,ನೇರವಾಗಿ ಬೇಟೆ ಆಡೋ ಹುಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪರನ್ನ  ನವಲಗುಂದ ಶಾಸಕರಾದ ಶಂಕರ ಪಾಟೀಲ್ ಮುನೇನಕೊಪ್ಪ ಹೊಗಳಿದ್ದಾರೆ.

shankar-patil-speak-about-yadiyurappa-in-darvada
ಶಂಕರ ಪಾಟೀಲ್ ಮುನೇನಕೊಪ್ಪ

By

Published : Dec 18, 2019, 6:14 PM IST

ಧಾರವಾಡ: ಇದು ಕೇವಲ ಘರ್ಜಿಸುವ ಹುಲಿ ಅಲ್ಲ, ನೇರವಾಗಿ ಬೇಟೆ ಆಡೋ ಹುಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪರನ್ನ ನವಲಗುಂದ ಶಾಸಕರಾದ ಶಂಕರ ಪಾಟೀಲ್ ಮುನೇನಕೊಪ್ಪ ಹೊಗಳಿದ್ದಾರೆ.

ಶಂಕರ ಪಾಟೀಲ್ ಮುನೇನಕೊಪ್ಪ

ಮಲಪ್ರಭಾ ಮುಖ್ಯ ಕಾಲುವೆ ಹಾಗೂ ಲ್ಯಾಟರಲ್ ಗಳ ಎರಡನೇ ಹಂತದ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಡುಕ ಅಭಿಮಾನಿಯೊಬ್ಬಮುಖ್ಯಮಂತ್ರಿಯನ್ನ ರಾಜಾಹುಲಿ ಎಂದು ಕೂಗಿದ ನಂತರ ಶಂಕರ್ ಪಾಟೀಲ್ ಮುನೇನಕೊಪ್ಪ ಇದು ಮಾತಾಡೋ ಹುಲಿ ಅಲ್ಲ, ಬೇಟೆ ಆಡೋ ಹುಲಿ ಎಂದು ಹೊಗಳಿದ್ದಾರೆ.

ಕೇವಲ ಘರ್ಜನೆ ಮಾಡಿ ಹೋಗುವ ಹುಲಿ ಇದಲ್ಲಾ, ನೇರವಾಗಿ ಶಿಖಾರಿ ಮಾಡಿ ರೈತರ ಆಶಾಕಿರಣವಾಗುವ ಹುಲಿ ಎಂದ ಅವರು, ಯಡಿಯೂರಪ್ಪ ಅವರಿಗೆ ರಾಜಾಹುಲಿ ಎಂದು ಕೂಗಿದ ವ್ಯಕ್ತಿ ನಮ್ಮ ವ್ಯಕ್ತಿ, ನಮ್ಮ ಅಭಿಮಾನಿ ಎಂದಿದ್ದಾರೆ.

For All Latest Updates

ABOUT THE AUTHOR

...view details