ಕರ್ನಾಟಕ

karnataka

By

Published : Apr 20, 2022, 7:35 PM IST

ETV Bharat / state

ಹುಬ್ಬಳ್ಳಿ ಗಲಭೆ ಪ್ರಕರಣ : ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸುವ ಸಂಚು ಬಹಿರಂಗ

ಘಟನೆಯ ದಿನ ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಲು ಸಂಚು ನಡೆಸಿದ್ದರು ಎಂದು ತಿಳಿದು ಬಂದಿದೆ. ಭದ್ರತೆಗೆ ಆಮಿಸಿದ್ದ ಪಕ್ಕದ ಕಸಬಾ ಪೊಲೀಸ್‌ ಠಾಣೆಯ ಸಿಬ್ಬಂದಿ ಮೇಲೆ ಇವರು ಕಣ್ಣು ಬಿದ್ದಿತ್ತಂತೆ..

ಹುಬ್ಬಳ್ಳಿ ಗಲಭೆಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸುವ ಸಂಚು ಬಹಿರಂಗ
ಹುಬ್ಬಳ್ಳಿ ಗಲಭೆಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸುವ ಸಂಚು ಬಹಿರಂಗ

ಹುಬ್ಬಳ್ಳಿ: ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಹೊಸ ಘಟನೆಗಳು ಹೊರ ಬೀಳುತ್ತಿವೆ. ಘಟನೆಯ ದಿನ ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಲು ಸಂಚು ನಡೆಸಿದ್ದರು ಎಂದು ತಿಳಿದು ಬಂದಿದೆ.

ಭದ್ರತೆಗೆ ಆಮಿಸಿದ್ದ ಪಕ್ಕದ ಕಸಬಾ ಪೊಲೀಸ್‌ ಠಾಣೆಯ ಸಿಬ್ಬಂದಿ ಮೇಲೆ ಇವರು ಕಣ್ಣು ಬಿದ್ದಿತ್ತಂತೆ. ಈ ಇಬ್ಬರು ಪೊಲೀಸ್​ ಸಿಬ್ಬಂದಿಯನ್ನು 15ಕ್ಕೂ ಹೆಚ್ಚು ಗಲಭೆಕೋರರು ಸುತ್ತುವರೆದಿದ್ದರು ಎನ್ನುವ ಮಾಹಿತಿ ಬಹಿರಂಗವಾಗಿದೆ.

ಈ ಸಂಬಂಧ ಪೊಲೀಸ್​ ಸಿಬ್ಬಂದಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ 10-15 ಗಲಭೆಕೋರರು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು ಎಂದು ದೂರು ದಾಖಲಿಸಿದ್ದಾರೆ.‌

For All Latest Updates

TAGGED:

ABOUT THE AUTHOR

...view details