ಕರ್ನಾಟಕ

karnataka

ETV Bharat / state

ಈಗಲಾದ್ರೂ ಸಚಿವರೆಲ್ಲ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಬೇಕು- ಮಾಜಿ ಸಚಿವ ಹೆಚ್‌ ಡಿ ರೇವಣ್ಣ

ರಾಜ್ಯದಲ್ಲಿ ಸುಮಾರು 13 ಜಿಲ್ಲೆಗಳಲ್ಲಿ ಪ್ರವಾಹ ಬಂದಿದೆ. ಜಿಲ್ಲೆಯ ಅಳ್ನಾವರ ಪ್ರದೇಶದ ಪ್ರವಾಹ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ರಾಜ್ಯದಲ್ಲಿ ಪ್ರವಾಹದಿಂದ ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗಿವೆ ಎಂದು ಮಾಜಿ‌ ಸಚಿವ ಹೆಚ್ ಡಿ ರೇವಣ್ಣ ಹೇಳಿದರು.

By

Published : Aug 20, 2019, 7:07 PM IST

Updated : Aug 20, 2019, 8:34 PM IST

ನೂತನ ಸಚಿವರು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಿ

ಧಾರವಾಡ: ರಾಜ್ಯದಲ್ಲಿ ಸುಮಾರು 13 ಜಿಲ್ಲೆಗಳಲ್ಲಿ ಪ್ರವಾಹ ಬಂದಿದೆ. ಜಿಲ್ಲೆಯ ಅಳ್ನಾವರ ಪ್ರದೇಶದ ಪ್ರವಾಹದ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ರಾಜ್ಯದಲ್ಲಿ ಪ್ರವಾಹದಿಂದ ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗಿವೆ ಎಂದು ಮಾಜಿ‌ ಸಚಿವ ಹೆಚ್ ಡಿ ರೇವಣ್ಣ ಹೇಳಿದರು.

ಅಳ್ನಾವರ ಪಟ್ಟಣದ ಪ್ರವಾಹ ಸ್ಥಳಗಳಿಗೆ ಭೇಟಿ‌ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 374 ಹಳ್ಳಿಗಳು ಸಂಪೂರ್ಣವಾಗಿ ಹಾನಿಯಾಗಿವೆ. ಖಾನಾಪುರ ತಾಲೂಕುವೊಂದರಲ್ಲೇ 10 ಸಾವಿರ ಮನೆ ಬಿದ್ದಿವೆ. ಹಳ್ಳಿಗೆ ಹಳ್ಳಿಗಳೇ ನಾಶವಾಗಿವೆ. ಇವತ್ತಿನವರೆಗೂ ಬಿಡಿಗಾಸು ಬಂದಿಲ್ಲ. ನಿನ್ನೆಯಷ್ಟೇ ಸರ್ಕಾರ, ಒಂದು ಕುಟುಂಬಕ್ಕೆ ಹತ್ತು ಸಾವಿರ ಕೊಡುವ ಆದೇಶ ಮಾಡಿದೆ. 5 ಲಕ್ಷ ಕೊಡ್ತೇವಿ, ಬಾಡಿಗೆ ಕೊಡ್ತೇನಿ ಅಂತಿದಾರೆ. ಆ ಬಗ್ಗೆ ಹೆಚ್ಚಿಗೆ ಮಾತನಾಡಲಾರೆ. ಇಷ್ಟು ದಿನ ಪಾಪ ಯಡಿಯೂರಪ್ಪ ಒಂಟಿಯಾಗಿ ತಿರುಗುತ್ತಿದ್ದರು. ಈಗ ಮಂತ್ರಿಮಂಡಲ ರಚನೆಯಾಗಿದೆ. ಈ 17 ಜನ ಮಂತ್ರಿಗಳನ್ನು ಕೂಡಲೇ ಪ್ರವಾಹ ಪೀಡಿತ ಪ್ರದೇಶಕ್ಕೆ ಕಳುಹಿಸಬೇಕು ಎಂದು ಆಗ್ರಹಿಸಿದರು.

ನೂತನ ಸಚಿವರು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಿ

ಆಯಾ ಸಚಿವರು ಜಿಲ್ಲಾಧಿಕಾರಿಗಳ ಜೊತೆ ಕುಳಿತು ಪರಿಹಾರದ ಬಗ್ಗೆ ಸಭೆ ಮಾಡಬೇಕು. ಹಿಂದೆಲ್ಲ‌ ಮನೆ ಬಿದ್ದರೆ 5-10 ಸಾವಿರ ಕೊಡುತ್ತಿದ್ದರು. ಕುಮಾರಸ್ವಾಮಿ ಸರ್ಕಾರ ಬಂದ ಮೇಲೆ ಅದು ಬದಲಾಗಿದೆ. ಸರ್ಕಾರ ಈಗ ಕಾನೂನು ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಕಾನೂನು ಸಡಿಲ ಮಾಡಿ ನೊಂದ ಕುಟುಂಬಗಳನ್ನು ಉಳಿಸಬೇಕು ಎಂದು ಮನವಿ ಮಾಡಿಕೊಂಡರು.

ಕೇಂದ್ರ ಸರ್ಕಾರ ಐದಾರು ಸಾವಿರ ಕೋಟಿ ಕೊಡಬೇಕು. ಬೇರೆ ರಾಜ್ಯಕ್ಕೆ ಹೆಚ್ಚು ಕೊಟ್ಟಿದಾರೆ ಅಂತಾ ಕೆಲವರು ಹೇಳುತ್ತಿದ್ದಾರೆ. ಅದರ ಬಗ್ಗೆ ಮಾತನಾಡಲಾರೆ. ಕೇಂದ್ರ ಸರ್ಕಾರದ ಹಣಕ್ಕೆ ಕಾಯದೇ ರಾಜ್ಯ ಸರ್ಕಾರ ಪರಿಹಾರ ಹಣ ಖರ್ಚು ಮಾಡಬೇಕು.‌ ನಿರಾಶ್ರಿತರಿಗೆ ದೊಡ್ಡ ಮಟ್ಟದಲ್ಲಿ ಪರಿಹಾರ ಕೊಟ್ಟು ಅವರ ವಿಶ್ವಾಸ ಗಳಿಸಬೇಕು ಎಂದರು.

ಸಚಿವ ಸಂಪುಟದಲ್ಲಿ ಕೆಲ ಭಾಗ ನಿರ್ಲಕ್ಷ್ಯ ವಿಚಾರಕ್ಕೆ ಮಾತನಾಡಿದ ಅವರು, ಹೈದರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ, ದಕ್ಷಿಣಕನ್ನಡ ಬಗ್ಗೆ ಪ್ರಶ್ನೆ ಮಾಡಲಾರೆ. ಈ ಭಾಗದ ನೊಂದ ಜನಕ್ಕೆ ಮಂತ್ರಿಗಳಿಗೆ ಆಯಾ ಜಿಲ್ಲೆಗಳನ್ನು ವಹಿಸಬೇಕು. ನೊಂದ ಜನರ ಅಹವಾಲು ಸ್ವೀಕರಿಸುವಂತಾಗಬೇಕು. ಕಾರ್ಯದರ್ಶಿಗಳು ಬೆಂಗಳೂರಿನಲ್ಲೆ ಇರಬಾರದು ಎಂದರು.

15 ಜನ ಕಾರ್ಯದರ್ಶಿಗಳನ್ನು ಕೂಡಲೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಕಳುಹಿಸಬೇಕು. ಕೇಂದ್ರ ಸರ್ಕಾರದಿಂದ ನೆರವು ಪಡೆಯಲು ಸರ್ವ ಪಕ್ಷ ನಿಯೋಗ ಒಯ್ಯಬೇಕು.‌ ಇದಕ್ಕಾಗಿ ಸಿಎಂ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ಮಾಡಬೇಕು. ಕುಮಾರಸ್ವಾಮಿ ಉತ್ತರ ಕರ್ನಾಟಕ ನೋಡಲಿಲ್ಲ ಎಂಬ ಆರೋಪ ಇತ್ತು ನಾವು ಮಾಡಲು ಆಗಿಲ್ಲ ಅಂತಾದ್ರೆ, ಉತ್ತರಕರ್ನಾಟಕ್ಕೆ ಇವರಾದ್ರೂ ಒಳ್ಳೇ ಕೆಲಸ ಮಾಡಲಿ ಎಂದು ಕುಟುಕಿದರು.

Last Updated : Aug 20, 2019, 8:34 PM IST

ABOUT THE AUTHOR

...view details