ಕರ್ನಾಟಕ

karnataka

ಎನ್​ಆರ್​ಸಿ ಮತ್ತು ಸಿಎಎ ವಿರೋಧಿಸಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ

By

Published : Jan 20, 2020, 1:45 PM IST

ಅಂಜುಮನ್ ಇ ಇಸ್ಲಾಂ ಸಂಸ್ಥೆಯ ನೇತೃತ್ವದಲ್ಲಿ ಹುಬ್ಬಳ್ಳಿ ನಗರದಲ್ಲಿ ಎನ್ಆರ್​ಸಿ ಮತ್ತು ಸಿಎಎ ವಿರೋಧಿಸಿ ತಹಶೀಲ್ದಾರ್​​ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತಿದೆ. ಈ ಪ್ರತಿಭಟನೆ ಒಂದು ವಾರ ನಡೆಯಲಿದೆ.

Protest in Hubli against NRC and CAA
ಎನ್​ಆರ್​ಸಿ ಮತ್ತು ಸಿಎಎ ವಿರೋಧಿಸಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ

ಹುಬ್ಬಳ್ಳಿ:ಅಂಜುಮನ್ ಇ ಇಸ್ಲಾಂ ಸಂಸ್ಥೆಯ ನೇತೃತ್ವದಲ್ಲಿ ಇಂದು ಅಲ್ತಾಫ್ ನಗರ, ಎನ್.ಎ.ನಗರ, ಈಶ್ವರ ನಗರ, ಜನತನಗರದ ನಿವಾಸಿಗಳು ಎನ್ಆರ್​ಸಿ ಮತ್ತು ಸಿಎಎ ವಿರೋಧಿಸಿ ನಗರದ ತಹಶೀಲ್ದಾರ್​​ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ರು. ಕೂಡಲೇ ಎನ್​​ಆರ್​ಸಿ ಹಾಗೂ ಸಿಎಎಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದ್ರು.

ಎನ್​ಆರ್​ಸಿ ಮತ್ತು ಸಿಎಎ ವಿರೋಧಿಸಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ

ಇನ್ನೂ ಒಂದು ವಾರದವರೆಗೆ ನಡೆಯಲಿರುವ ಈ ಪ್ರತಿಭಟನೆ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಡೆಯಲಿದೆ.‌ ಈ ವೇಳೆ ಒಂದೊಂದು ದಿನ ನಗರದ ನಾಲ್ಕು ನಗರದ ನಿವಾಸಿಗಳು ಪ್ರತಿಭಟನೆ ಮಾಡಲಿದ್ದಾರೆ.

ಪ್ರತಿಭಟನೆಯಲ್ಲಿ ಮಾಜಿ ಸಂಸದ ಐ.ಜಿ.ಸನದಿ, ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಮಾಜಿ ಎಂಎಲ್​ಸಿ ಇಸ್ಮಾಯಿಲ್ ಕಾಲೇಬುಡೆ, ಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಯೂಸುಫ್ ಸವಣೂರು, ಉಪಾಧ್ಯಕ್ಷ ಅಲ್ತಾಫ್ ಕಿತ್ತೂರ, ಬಸೀರ ಹಳ್ಳೂರ ಸೇರಿದಂತೆ ಮುಂತಾದವರು ಇದ್ದರು.

ABOUT THE AUTHOR

...view details