ಕರ್ನಾಟಕ

karnataka

ETV Bharat / state

ಪಾಕ್​ ಪರ ಘೋಷಣೆ ಪ್ರಕರಣ: ಹುಬ್ಬಳ್ಳಿ ಗ್ರಾಮೀಣ ಠಾಣೆಗೆ ಕೇಸ್​ ವರ್ಗಾವಣೆ

ಪಾಕ್ ಪರ ‌ಘೋಷಣೆ ಕೂಗಿದ ಕಾಶ್ಮೀರ ಮೂಲದ ವಿದ್ಯಾರ್ಥಿಗಳಾದ ಅಮೀರ್, ಬಾಸಿತ್, ತಾಲಿಬ್ ಅವರ ಕುಟುಂಬಸ್ಥರು ಹುಬ್ಬಳ್ಳಿಗೆ ಆಗಮಿಸಿದ್ದಾರೆ.

By

Published : Feb 18, 2020, 3:05 PM IST

Updated : Feb 18, 2020, 3:49 PM IST

ಪಾಕ್​ ಪರ ಘೋಷಣೆ ಪ್ರಕರಣ,  pro pakisthan proclamation case
ಪಾಕ್​ ಪರ ಘೋಷಣೆ ಪ್ರಕರಣ

ಹುಬ್ಬಳ್ಳಿ :ಪಾಕ್ ಪರ ‌ಘೋಷಣೆ ಕೂಗಿದ ಕಾಶ್ಮೀರ ಮೂಲದ ವಿದ್ಯಾರ್ಥಿಗಳಾದ ಅಮೀರ್, ಬಾಸಿತ್, ತಾಲಿಬ್ ಅವರ ಕುಟುಂಬಸ್ಥರು ಹುಬ್ಬಳ್ಳಿಗೆ ಆಗಮಿಸಿದ್ದಾರೆ.

ಹುಬ್ಬಳ್ಳಿಯ ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿದ ಕಾಶ್ಮೀರಿ ವಿದ್ಯಾರ್ಥಿಗಳ ಕುಟುಂಬಸ್ಥರು ಘಟನೆಯ ಬಗ್ಗೆ ನವನಗರದಲ್ಲಿರುವ ಹು-ಧಾ ಕಮಿಷನರ್ ಕಚೇರಿಗೆ ಆಗಮಿಸಿ, ಪೊಲೀಸ್ ಆಯುಕ್ತರಿಂದ ಮಾಹಿತಿ‌ ಪಡೆದುಕೊಂಡರು.

ಪೊಲೀಸರು ತಮ್ಮ ವಾಹನದಲ್ಲಿಯೇ ಆರೋಪಿಗಳ‌ ಸಂಬಂಧಿಗಳನ್ನು ಬೆಳಗಾವಿ ಜೈಲಿಗೆ ಕಳುಹಿಸಿಕೊಟ್ಟಿದ್ದಾರೆ.

ವಿದ್ಯಾರ್ಥಿಗಳ ಕುಟುಂಬಸ್ಥರು

ಹುಬ್ಬಳ್ಳಿ ಗ್ರಾಮೀಣ ಠಾಣೆಗೆ ಪ್ರಕರಣ ವರ್ಗಾವಣೆ :

ಪ್ರಕರಣದ ಕುರಿತು‌ ಪ್ರತಿಕ್ರಿಯೆ ನೀಡಿದ ಪೊಲೀಸ್ ಆಯುಕ್ತ ಆರ್.ದಿಲೀಪ್, ಪ್ರಕರಣಕ್ಕೆ ಹೊಸ ತಿರುವು ಕೊಟ್ಟಿದ್ದಾರೆ. ಈ‌ ಪ್ರಕರಣವನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿದ ಪ್ರಕರಣದ ವಿಡಿಯೋವನ್ನು ಕುಂದಗೋಳ‌ ಕ್ರಾಸ್​ನ ಕೆಎಲ್​ಇ ಹಾಸ್ಟೆಲ್​ನಲ್ಲಿ ಚಿತ್ರಿಕರಿಸಲಾಗಿದೆ. ಮ್ಯಾಜಿಸ್ಟ್ರೇಟ್ ಆದೇಶದ ಮೇರೆಗೆ ಹುಬ್ಬಳ್ಳಿ ಗ್ರಾಮೀಣ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿದ್ದೇವೆ ಎಂದು ತಿಳಿಸಿದರು.

ಪೊಲೀಸ್ ಆಯುಕ್ತ ಆರ್.ದಿಲೀಪ್ ಪ್ರತಿಕ್ರಿಯೆ

ವಿದ್ಯಾರ್ಥಿಗಳನ್ನು ಬಾಂಡ್ ಮೇಲೆ ಬಿಡುಗಡೆ ‌ಮಾಡಿದ್ದರ ವಿಚಾರವಾಗಿ, ಬಾಂಡ್ ಬಗ್ಗೆ ನಾನು ಈ ಸಮಯದಲ್ಲಿ ಮಾತನಾಡುವದಿಲ್ಲ. ಪ್ರಕರಣ ತನಿಖೆಯ ಹಂತದಲ್ಲಿದೆ. ಈ ವೇಳೆ ನಾನೇನು ಮಾತನಾಡುವದಿಲ್ಲ ಎಂದರು.

ಸೆಕ್ಷನ್ 124A ಅಡಿ ಪ್ರಕರಣದ ದಾಖಾಲಾಗಿದ್ದರು, ಬಾಂಡ್ ಮೇಲೆ ಹೊರ ಬಿಟ್ಟಿದ್ದಕ್ಕೆ ಪೊಲೀಸ್​ ಆಯುಕ್ತರು ಸ್ಪಷ್ಟನೆ ನೀಡಲಿಲ್ಲ.

Last Updated : Feb 18, 2020, 3:49 PM IST

ABOUT THE AUTHOR

...view details