ಕರ್ನಾಟಕ

karnataka

ಹುಬ್ಬಳ್ಳಿಯಲ್ಲಿ ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ: ಐವರ ಬಂಧನ

By

Published : May 11, 2020, 10:26 PM IST

ಹುಬ್ಬಳ್ಳಿಯ ಉಣಕಲ್ ಕೆರೆಯ ಓಣಿಯಲ್ಲಿರುವ ಕರೆಮ್ಮನ ಗುಡಿ ಬಳಿ ಜೂಜಾಟದಲ್ಲಿ ನಿರತರಾಗಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.

Police raid gambling center
ಜೂಜು ಅಡ್ಡೆ ಮೇಲೆ ಪೊಲೀಸ್ ದಾಳಿ: ಹುಬ್ಬಳ್ಳಿಯಲ್ಲಿ ಐವರ ಬಂಧನ

ಹುಬ್ಬಳ್ಳಿ:ಲಾಕ್​ಡೌನ್ ಮಧ್ಯೆಯೂ ಜೂಜಾಟದಲ್ಲಿ ನಿರತರಾಗಿದ್ದವರನ್ನು ಬಂಧಿಸುವಲ್ಲಿ ವಿದ್ಯಾನಗರ ಠಾಣೆ‌ ಪೊಲೀಸರು ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ಹುಬ್ಬಳ್ಳಿಯ ಉಣಕಲ್ ಕೆರೆಯ ಓಣಿಯಲ್ಲಿರುವ ಕರೆಮ್ಮನ ಗುಡಿ ಹತ್ತಿರ ದಾಳಿ ‌ನಡೆಸಿದ ಪೊಲೀಸರು, ಐವರನ್ನು ಬಂಧಿಸಿದ್ದಾರೆ.


ಕಲ್ಲಪ್ಪ ಬಸಪ್ಪ ವಾಲಿಕಾರ್, ಕಲ್ಲಪ್ಪ ಹನುಮಂತಪ್ಪ ಕಡಪಟ್ಟಿ, ಸಿದ್ದಪ್ಪ ಕೇರಪ್ಪ ಇಂಗನಹಳ್ಳಿ, ತಿರಕಪ್ಪ ಭೀಮಪ್ಪ ಭಾಗಣ್ಣವರ ಮತ್ತು ಮಂಜುನಾಥ ಮಾರುತಿ ವಾಲಿಕಾರ ಬಂಧಿತ ಆರೋಪಿಗಳು. ಬಂಧಿತರಿಂದ 4,200 ನಗದು ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details