ಧಾರವಾಡ: ಬಸ್ ಕಂಡಕ್ಟರ್ ಮಗಳು, ಹೂವಿನ ವ್ಯಾಪಾರಿ, ತಹಶೀಲ್ದಾರ್ ಕಚೇರಿಯ ಏಜೆಂಟ್ ಸೇರಿದಂತೆ ಹಲವರಲ್ಲಿ ನಿನ್ನೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಬಸ್ ಕಂಡಕ್ಟರ್ ಮಗಳಿಂದ ತಂದೆಗೂ ಸೋಂಕು ಹರಡಿರುವ ಶಂಕೆ ವ್ಯಕ್ತವಾಗಿದೆ.
ಧಾರವಾಡದಲ್ಲಿ ಹೆಚ್ಚುತ್ತಿದೆ ಕೊರೊನಾ ಉಪಟಳ, ಜನರಲ್ಲಿ ಹೆಚ್ಚಿದ ಆತಂಕ - dharwad corona news
ಧಾರವಾಡದಲ್ಲಿ ನಿನ್ನೆ ಬಸ್ ಕಂಡಕ್ಟರ್ ಮಗಳು, ಹೂವಿನ ವ್ಯಾಪಾರಿ, ತಹಶೀಲ್ದಾರ್ ಕಚೇರಿಯ ಏಜೆಂಟ್ ಸೇರಿದಂತೆ ಹಲವರಲ್ಲಿ ಸೋಂಕು ಕಾಣಿಸಿಕೊಂಡಿದೆ.
![ಧಾರವಾಡದಲ್ಲಿ ಹೆಚ್ಚುತ್ತಿದೆ ಕೊರೊನಾ ಉಪಟಳ, ಜನರಲ್ಲಿ ಹೆಚ್ಚಿದ ಆತಂಕ corona](https://etvbharatimages.akamaized.net/etvbharat/prod-images/768-512-7872234-thumbnail-3x2-news.jpg)
ಧಾರವಾಡದಲ್ಲಿ ಕೊರೊನಾತಂಕ
ಹೂವಿನ ವ್ಯಾಪಾರಿಗೆ ಸೋಂಕು ದೃಡಪಟ್ಟ ಹಿನ್ನೆಲೆಯಲ್ಲಿ ಆತ ವಾಸವಿದ್ದ ಗರಗ ಗ್ರಾಮದಲ್ಲಿ ಆತಂಕ ಸೃಷ್ಟಿಯಾಗಿದೆ. ತಹಸೀಲ್ದಾರ್ ಕಚೇರಿಯಲ್ಲಿ ಏಜೆಂಟ್ ಆಗಿದ್ದ 29 ವರ್ಷದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದ್ದು, ಕಂದಾಯ ಇಲಾಖೆಯ ಸಿಬ್ಬಂದಿಗಳಲ್ಲಿಯೂ ಆತಂಕ ಶುರುವಾಗಿದೆ.