ಹುಬ್ಬಳ್ಳಿ:ಕೊರೊನಾ ಸೋಂಕಿನಿಂದ ಗುಣಮುಖರಾದವರನ್ನು ತಾಲೂಕಿನ ಕುಸುಗಲ್ ಗ್ರಾಮದ ಪಿಡಿಒ ನಿತ್ಯ ಆರೋಗ್ಯ ವಿಚಾರಿಸಿ, ಕಾಳಜಿ ವಹಿಸುವಂತೆ ತಿಳಿಸುತ್ತಿದ್ದಾರೆ.
ಕುಸುಗಲ್ ಗ್ರಾಮದ ಕೆಲವರಿಗೆ ಕೊರೊನಾ ಸೋಂಕು ತಗುಲಿತ್ತು. ಅವರೆಲ್ಲರೂ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿ ಮನೆಯಲ್ಲಿ ಕ್ವಾರಂಟೈನ್ನಲ್ಲಿದ್ದಾರೆ. ಹೀಗಾಗಿ ಪಿಡಿಒ ಶಶಿಕಾಂತ ಮಂಟೂರ ನಿತ್ಯ ಇವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸುತ್ತಿದ್ದು, ಧೈರ್ಯ ತುಂಬುತ್ತಿದ್ದಾರೆ.
ಸೋಂಕು ಮುಕ್ತರಾದವರು ಏನಾದರು ಸಹಾಯ ಬೇಕಾದರೆ ನೇರವಾಗಿ ತಿಳಿಸುವಂತೆ ಪಿಡಿಒ ತಿಳಿಸಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.