ಹುಬ್ಬಳ್ಳಿ: ಬೆಂಡಲಗಟ್ಟಿ ಗ್ರಾಮದ ವಿಶ್ವನಾಥ ವೈದ್ಯ ಎಂಬುವರ ಗೋವಿನ ಜೋಳದಲ್ಲಿ ಹುಲಿ ಅವಿತುಕೊಂಡು ಕುಳಿತಿದ್ದು, ಅದು ಗ್ರಾಮದ ಒಳಗೆ ಹೋಗದಂತೆ ತಡೆಯಲು ಸುತ್ತಲೂ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಕ್ರಮ ಕೈಗೊಂಡಿದ್ದಾರೆ.
ಹುಲಿ ಬಂತು ಹುಲಿ: ಜೋಳದ ಹೊಲದಲ್ಲಿ ಪ್ರತ್ಯಕ್ಷನಾದ ವ್ಯಾಘ್ರ... ಡ್ರೋನ್ ಕ್ಯಾಮರದಾಲ್ಲಿ ಸೆರೆ! - ಧಾರವಾಡ ವಲಯ ಸಂರಕ್ಷಣಾಧಿಕಾರಿ ಬಸವರಾಜ ಇಳಿಗೆರ್
ಕಲಘಟಗಿ ತಾಲೂಕಿನ ಬೆಂಡಲಗಟ್ಟಿ ಗ್ರಾಮದ ಬಳಿ ಇರುವ ಹೊಲವೊಂದರಲ್ಲಿ ಹುಲಿ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಭಯ ಭೀತರಾಗಿದ್ದಾರೆ. ಬೆಂಡಲಗಟ್ಟಿ ಗ್ರಾಮದ ವಿಶ್ವನಾಥ ವೈದ್ಯ ಎಂಬುವರ ಜಮೀನಿನಲ್ಲಿ ಹುಲಿ ಅವಿತುಕೊಂಡು ಕುಳಿತಿದ್ದು, ಇದು ಗ್ರಾಮದ ಒಳಗೆ ಹೋಗದಂತೆ ಸುತ್ತಲೂ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಎಚ್ಚರಿಕೆ ವಹಿಸಿದ್ದಾರೆ.
ಜೋಳದ ಹೊಲದಲ್ಲಿ ಪ್ರತ್ಯಕ್ಷವಾದ ಹುಲಿರಾಯ, ಡ್ರೋನ್ ಕ್ಯಾಮರದಾಲ್ಲಿ ಸೆರೆ..!
ಹುಲಿ ಗ್ರಾಮಕ್ಕೆ ಬಂದ ವಿಚಾರ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಯಭೀತರಾಗಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಮುಂಜಾಗೃತವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅರಣ್ಯಾಧಿಕಾರಿಗಳು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಧಾರವಾಡ ವಲಯ ಸಂರಕ್ಷಣಾಧಿಕಾರಿ ಬಸವರಾಜ ಇಳಿಗೇರ್, ತಾಲೂಕಿನ ವಲಯ ಅರಣ್ಯಾಧಿಕಾರಿ ಶ್ರೀಕಾಂತ ಹಾಗೂ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.