ಕರ್ನಾಟಕ

karnataka

By

Published : Feb 7, 2020, 2:06 PM IST

ETV Bharat / state

ಪ್ರೇಮಿಗಳ ದಿನಕ್ಕೆ ಶ್ರೀರಾಮಸೇನೆ ವಿರೋಧ: ಗಂಗಾಧರ ಕುಲಕರ್ಣಿ ಹೇಳಿಕೆ

ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆ ಹೆಸರಿನಲ್ಲಿ ಪುಂಡಾಟಿಕೆ ನಡೆಸುತ್ತಾರೆ ಎಂಬ ಉದ್ದೇಶದಿಂದಾಗಿ ಪ್ರೇಮಿಗಳ ದಿನಕ್ಕೆ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಶ್ರೀರಾಮ ಸೇನೆ ರಾಜ್ಯ ಕಾರ್ಯದರ್ಶಿ ಹೇಳಿಕೆ ನೀಡಿದ್ದಾರೆ.

Opposition for Valentines day
ಗಂಗಾಧರ ಕುಲಕರ್ಣಿ ಹೇಳಿಕೆ

ಧಾರವಾಡ: ಫೆ.14 ರಂದು ಆಚರಣೆ ಮಾಡುವ ಪ್ರೇಮಿಗಳ ದಿನಕ್ಕೆ ಈ ಬಾರಿಯೂ ಧಾರವಾಡದಲ್ಲಿ ಶ್ರೀರಾಮಸೇನೆ ವಿರೋಧ ವ್ಯಕ್ತಪಡಿಸಿದೆ.

ಈ ಕುರಿತು ಶ್ರೀರಾಮಸೇನಾ ರಾಜ್ಯ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಹೇಳಿಕೆ ನೀಡಿದ್ದು, ಪ್ರೇಮಿಗಳಿಗೆ ಹಾಗೂ ಪ್ರೇಮಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಪ್ರೇಮಿಗಳ ದಿನದ ನ ನೆಪವಿಟ್ಟುಕೊಂಡು ಸಾರ್ವಜನಿಕ ಸ್ಥಳದಲ್ಲಿ ಬೇಕಾಬಿಟ್ಟಿ ಪುಂಡಾಟಿಕೆ ಮಾಡಿದರೆ ಅಂತಹವರಿಗೆ ಬಿಸಿ ಮುಟ್ಟಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಗಂಗಾಧರ ಕುಲಕರ್ಣಿ ಹೇಳಿಕೆ

ಪ್ರೇಮಿಗಳ ದಿನಾಚರಣೆಗೆ ಕೇಂದ್ರ ಸರ್ಕಾರ 1 ಲಕ್ಷ ಹಾಗೂ ರಾಜ್ಯ ಸರ್ಕಾರ 50 ಸಾವಿರ ರೂ. ನೀಡಬೇಕು ಎಂಬ ವಾಟಾಳ್ ನಾಗರಾಜ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಯಾವ ಪುರುಷಾರ್ಥಕ್ಕಾಗಿ ಪ್ರೇಮಿಗಳಿಗೆ ಇಷ್ಟೆಲ್ಲ ಸೌಲಭ್ಯ ಕೊಡಬೇಕು ಎಂದು ಪ್ರಶ್ನಿಸಿದ್ದಾರೆ.

ABOUT THE AUTHOR

...view details