ಕರ್ನಾಟಕ

karnataka

ETV Bharat / state

ಕಟ್ಟಡ ಕಾರ್ಮಿಕರಿಗೆ ಸ್ಪಂದಿಸದ ಅಧಿಕಾರಿಗಳು : ಮಾಧ್ಯಮಗಳ ಮುಂದೆ ಕಾರ್ಮಿಕರ ಅಳಲು

ಹುಬ್ಬಳ್ಳಿಯ ಕಟ್ಟಡ ಕಾರ್ಮಿಕರು ಮಕ್ಕಳ ಸ್ಕಾಲರ್​​ಶಿಪ್​​​​​​​​​ಗೆ ಅರ್ಜಿ ಹಾಕಿ ವರ್ಷಗಳೇ ಕಳೆದರೂ ನಮಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.

By

Published : May 21, 2020, 9:38 PM IST

Officers who do not touch building workers
ಕಟ್ಟಡ ಕಾರ್ಮಿಕರಿಗೆ ಸ್ಪಂಧಿಸದ ಅಧಿಕಾರಿಗಳು

ಹುಬ್ಬಳ್ಳಿ :ತಮ್ಮ ಮಕ್ಕಳ ಸ್ಕಾಲರ್​​ಶಿಪ್​​​​​​​ಗೆ ಅರ್ಜಿ ಹಾಕಿ ವರ್ಷಗಳೇ ಕಳೆದರೂ ನಮಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ಕಟ್ಟಡ ಕಾರ್ಮಿಕರು ಹುಬ್ಬಳ್ಳಿ ಸಹಾಯಕ ಕಾರ್ಮಿಕ ಕಚೇರಿಯ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.

ಕಟ್ಟಡ ಕಾರ್ಮಿಕರಿಗೆ ಸ್ಪಂದಿಸದ ಅಧಿಕಾರಿಗಳು

ಸದ್ಯ ಲಾಕ್ ಡೌನ್ ಇದೆ. ಇದರಿಂದ ಜೀವನ ನಡೆಸುವುದೇ ಕಷ್ಟವಾಗಿದೆ. ಇಂತಹ ಕಷ್ಟದ ಸಮಯದಲ್ಲಿ ಸಹಾಯ ಕೇಳಿಕೊಂಡು ಕಚೇರಿಗೆ ಬಂದರೆ ಸಿಬ್ಬಂದಿ ಇರುವುದಿಲ್ಲ, ಜೊತೆಗೆ ಹಿರಿಯ ಅಧಿಕಾರಿಗಳನ್ನು ಭೇಟಿ ಯಾಗಲು ಒಳಗಡೆ ಬಿಡುವುಲ್ಲ ಎಂದು ಆರೋಪಿಸಿದರು.

ಕಾರ್ಮಿಕರಿಗೆ ಸಹಾಯ ಮಾಡಬೇಕಾದ ಇಲಾಖೆಯ ಅಧಿಕಾರಿಗಳು ಮಾತ್ರ ಕಾರ್ಮಿಕರಿಗೆ ಸ್ಪಂದನೆ ಮಾಡುತ್ತಿಲ್ಲ. ಮಕ್ಕಳಿಗೆ ಶಿಕ್ಷಣ ಕಲಿಸುವುದು ಹೇಗೆ ಎಂದು ಪ್ರಶ್ನೆ ಎದುರಾಗಿದೆ ಎಂದು ತಮ್ಮ ಅಸಹಾಯತೆಯನ್ನು ಮಾಧ್ಯಮಗಳ ಮುಂದೆ ಇಟ್ಟರು.

ABOUT THE AUTHOR

...view details