ಹುಬ್ಬಳ್ಳಿ :ಕೋವಿಡ್ ಸಂದರ್ಭದಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ನಗದು ರಹಿತ ವ್ಯವಹಾರಕ್ಕೆ ಹೆಚ್ಚಿನ ಶ್ರಮ ಹಾಕಲಾಗಿತ್ತು. ಇದೀಗ ರಾಜ್ಯದಲ್ಲೇ ಮೊದಲ ಬಾರಿಗೆ ನಗದು ರಹಿತ ವ್ಯವಹಾರಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಪೇಟಿಎಂನತ್ತ ಮುಖ ಮಾಡಿದೆ.
ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರ ಹತ್ತಿರ ಸ್ಮಾರ್ಟ್ ಫೋನ್ಗಳು ಇವೆ. ಹಣ ವರ್ಗಾವಣೆ ಮಾಡುವಂತಹ ಆ್ಯಪ್ಗಳು ಇದ್ದೇ ಇರುತ್ತವೆ. ಅಷ್ಟೇ ಅಲ್ಲ, ಚಿಲ್ಲರೆ ಇಲ್ಲದ ಕಾರಣದಿಂದ ಅದೆಷ್ಟೋ ಜಗಳಗಳು ನಡೆದಿವೆ. ಇದನ್ನೆಲ್ಲ ಜನರಿಗೆ ಹಾಗೂ ಸಂಸ್ಥೆಗೆ ಸರಳವಾಗಲಿ ಎಂಬ ದೃಷ್ಟಿಯಿಂದ ಪೇಟಿಎಂ ಬಾರ್ ಕೋಡ್ ಅಳವಡಿಸಿದೆ.
ಈಗಾಗಲೇ ಬಿಆರ್ಟಿಎಸ್ ಟೀಕೆಗೆ ಕೌಂಟರ್ಗಳಲ್ಲಿ ಬಾರ್ ಕೋಡ್ ಅನ್ನು ಅಳವಡಿಸಿದೆ. ಮುಂದಿನ ಕೆಲ ದಿನಗಳ ನಂತರ ಗ್ರಾಮಾಂತರ ಬಸ್, ವೇಗದೂತ ಬಸ್ಗಳಲ್ಲೂ ಅಳವಡಿಸಲಾಗುತ್ತದೆ ಎಂದು ವಾಕರಸಾ ಸಂಸ್ಥೆ ವ್ಯವಸ್ಥಾಪಕರಾದ ಗುರುದತ್ತ ಹೆಗಡೆ ಹೇಳಿದರು.