ಧಾರವಾಡ:ಕಡಪಾ ಮೈದಾನದಲ್ಲಿ ದೇಶಭಕ್ತ ವೇದಿಕೆಯಿಂದ ಜರುಗಿದ ಸಿಎಎ ಬೆಂಬಲಿಸಿ ಸಾರ್ವಜನಿಕ ಸಬೆಯಲ್ಲಿ ಪ್ರಮೋದ್ ಮುತಾಲಿಕ್ ಇಂದಿರಾ ಗಾಂಧಿ ಅವರನ್ನು ಹಾಡಿ ಹೊಗಳಿದ್ದಾರೆ.
ಸಿಎಎ ಪರ ಬಹಿರಂಗ ಸಭೆ: ಇಂದಿರಾ ಗಾಂಧಿಯನ್ನು ಹಾಡಿ ಹೊಗಳಿದ ಮುತಾಲಿಕ್ - ಬಾಂಗ್ಲಾ ಮತ್ತು ಪಾಕಿಸ್ತಾನದಿಂದ ಬಂದ ಹಿಂದೂಗಳಿಗೆ ಮೊದಲು ಪೌರತ್ವ
ಮೊದಲ ಬಾರಿಗೆ ಬಹಿರಂಗವಾಗಿ ಇಂದಿರಾಗಾಂಧಿಯನ್ನು ಶ್ರೀರಾಮಸೇನಾ ಮುಖಂಡ ಪ್ರಮೋದ್ ಮುತಾಲಿಕ್ ಹಾಡಿ ಹೊಗಳಿದ್ದಾರೆ.
![ಸಿಎಎ ಪರ ಬಹಿರಂಗ ಸಭೆ: ಇಂದಿರಾ ಗಾಂಧಿಯನ್ನು ಹಾಡಿ ಹೊಗಳಿದ ಮುತಾಲಿಕ್ KN_DWD_5_caa_para_open_meeting_avb_KA10001](https://etvbharatimages.akamaized.net/etvbharat/prod-images/768-512-6008992-thumbnail-3x2-mnd.jpg)
ದೌರ್ಜನ್ಯಕ್ಕೊಳಗಾದ ಹಲವಾರು ಜನರಿಗೆ ಸೌಲಭ್ಯಗಳನ್ನು ಕೊಟ್ಟದ್ದು ಇಂದಿರಾಗಾಂಧಿ, ಅದನ್ನು ಎಲ್ಲರೂ ಒಪ್ಪಿಕೊಂಡಿದ್ದರು. ಇದನ್ನು ಪ.ಬಂ. ಸಿಎಂ ಮಮತಾ ಕೂಡಾ ಒಪ್ಪಿಕೊಂಡಿದ್ದರು. ಹಿಂದೆ ಬಾಂಗ್ಲಾದಿಂದ ಬಂದ ಹಿಂದೂಗಳಿಗೆ ಯಾವಾಗ ಪೌರತ್ವ ನೀಡುತ್ತಿರಿ ಎಂದು ದ್ವನಿ ಕೂಡಾ ಎತ್ತಿದ್ದರು. ಅವತ್ತು ಒಪ್ಪಿಗೆ ಕೊಟ್ಟವರು ಇವತ್ತು ವಿರೋಧ ಮಾಡಲು ಒಂದೇ ಕಾರಣ ಅದು ಅಧಿಕಾರ, ಅವರಿಗೆ ದೇಶದ ಬಗ್ಗೆ ಕಾಳಜಿ ಇಲ್ಲ, ಕೇವಲ ಖುರ್ಚಿಯ ಚಿಂತೆ ಅಷ್ಟೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ಬರುದ್ದಿನ್ ಮತ್ತು ಅಸಾದುದ್ದಿನ್ ಓವೈಸಿ ಇಬ್ಬರು ಇರೋದೆ ದೇಶದಲ್ಲಿ ಬೆಂಕಿ ಹಚ್ಚಲು. ಹಿಂದೆ ದಲಿತರನ್ನು ಪಾಕಿಸ್ತಾನಕ್ಕೆ ಸೇರಿಸುವ ಕೆಲಸವನ್ನು ಮಾಡಿದ್ರು. ಸಫಲ ಕೂಡಾ ಆದ್ರು. ನಂತರ ಅವರಿಗೆಲ್ಲ ತಿಳಿಯಿತು. ಇದೊಂದು ಇಸ್ಲಾಮಿಕ್ ದೇಶ. ನಮಗೆಲ್ಲ ಇಲ್ಲಿ ಜಾಗ ಇಲ್ಲ ನಮ್ಮ ಮೇಲೆ ದೌರ್ಜನ್ಯ ನಡಿತಾಯಿದೆ ಎಂದು ಈ ಕಾಯಿದೆಯಿಂದ ಭಾರತೀಯ ಮುಸ್ಲಿಂರಿಗೆ ಯಾವುದೇ ತೊಂದರೆಯಿಲ್ಲ. ನೀವೆಲ್ಲ ಭಾರತ ಮಾತೆಯ ಮಕ್ಕಳು ಎಂದು ಎರಡನೆ ಸರ್ದಾರ ವಲ್ಲಭಬಾಯಿ ಪಟೇಲ್ ಅಮಿತ್ ಷಾ ಮತ್ತು ಮೋದಿ ಹಲವು ಬಾರಿ ಹೇಳಿದ್ದಾರೆ ಎಂದರು.