ಕರ್ನಾಟಕ

karnataka

ETV Bharat / state

ರಂಜಾನ್ ಹಿನ್ನೆಲೆ: ಮಠಕ್ಕೆ ಭೇಟಿ ಕೊಟ್ಟು ಸಾಮರಸ್ಯ ಮೆರೆದ ಮುಸ್ಲೀಮರು - ramzan, mooru savira matt, hubballi, guru rajayogindra swamiji

ಹಿಂದೂ-ಮುಸ್ಲೀಮರು ಸ್ನೇಹ ಸೌಹಾರ್ಧತೆಯಿಂದ ಬಾಳಬೇಕು ಎಂದು ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಜನತೆಗೆ ಕರೆ ಕೊಟ್ಟರು.

ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದ ಸ್ವಾಮೀಜಿ

By

Published : Jun 5, 2019, 1:00 PM IST

ಹುಬ್ಬಳ್ಳಿ:ರಂಜಾನ್ ಪ್ರಯುಕ್ತ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮುಸ್ಲಿಂ ಬಾಂಧವರು ಮೂರು ಸಾವಿರ‌ ಮಠಕ್ಕೆ ಭೇಟಿ ನೀಡಿ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದುಕೊಂಡರು. ಇದೇ ವೇಳೆ ಸ್ವಾಮೀಜಿ ಅವರು ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯ ಕೋರಿದರು.

ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದ ಸ್ವಾಮೀಜಿ

ಬಳಿಕ ಮಾತನಾಡಿದ ಸ್ವಾಮೀಜಿ, ಹಲವು ದಶಕಗಳಿಂದಲೂ ಈ ಸಂಪ್ರದಾಯ ಮುಂದುವರಿದುಕೊಂಡು ಬರುತ್ತಿದೆ. ಹಿಂದೂ-‌ಮುಸ್ಲೀಮರಲ್ಲಿ ಸಾಮರಸ್ಯ ಎಂದೆಂದಿಗೂ ನೆಲೆಸಲಿ. ಎಲ್ಲರೂ ಸಹೋದರಂತೆ ಬಾಳಬೇಕು ಎಂದು ಆಶೀರ್ವದಿಸಿದರು. ಅಲ್ಲದೇ, ರಂಜಾನ್ ಹಬ್ಬಕ್ಕೂ ಮೂರು ಸಾವಿರ ಮಠಕ್ಕೂ ಅವಿನಾಭಾವ ಸಂಬಂಧವಿದೆ ಎಂದರು. ಮುಸ್ಲಿಂ ಸಮುದಾಯದ ಮೌಲ್ವಿಗಳು, ಮುಖಂಡ ಎ.ಎಂ.ಹಿಂಡಸಗೇರಿ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.

For All Latest Updates

TAGGED:

ABOUT THE AUTHOR

...view details