ಕರ್ನಾಟಕ

karnataka

ETV Bharat / state

ಸರ್ಕಾರಿ ಜಾಗ ಅತಿಕ್ರಮಿಸಿ ಕಟ್ಟಡ ಕಾಮಗಾರಿ: ಮಾಲೀಕನಿಗೆ ಮಹಾನಗರ ಪಾಲಿಕೆ ನೋಟಿಸ್​ - ಕಟ್ಟಡ ತೆರವು

ಬಸ್​ ನಿಲ್ದಾಣ ಹಾಗೂ ಫುಟ್​​ಪಾತ್ ಅತಿಕ್ರಮಿಸಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸಿದ್ದ ಮಾಲೀಕರಿಗೆ ಮಹಾನಗರ ಪಾಲಿಕೆ ನೋಟಿಸ್ ನೀಡಿದೆ.

municipality-noticed-to-owner-who-illegally-started-building-construction-in-govt-space
ಸರ್ಕಾರಿ ಜಾಗ ಅತಿಕ್ರಮಿಸಿ ಕಟ್ಟಡ ಕಾಮಗಾರಿ

By

Published : Sep 23, 2021, 4:03 PM IST

ಹುಬ್ಬಳ್ಳಿ:ಇಲ್ಲಿನವಿದ್ಯಾನಗರದ ಶಿರೂರ ಪಾರ್ಕ್​​​ ಬಳಿಯ ಸಾರ್ವಜನಿಕ ಬಸ್​​ ನಿಲ್ದಾಣ ಹಾಗೂ ಫುಟ್​​​ಪಾತ್ ಆಕ್ರಮಿಸಿಕೊಂಡು ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದ ಕಟ್ಟಡ ಮಾಲೀಕನಿಗೆ ಮಹಾನಗರ ಪಾಲಿಕೆ ನೋಟಿಸ್ ನೀಡಿದೆ.

ಸುನೀಲ್ ಕೊಠಾರಿ ಎಂಬುವರಿಗೆ ಸೇರಿರುವ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ವೇಳೆ ಬಸ್​ ನಿಲ್ದಾಣ ಸೇರಿದಂತೆ ಫುಟ್​ಪಾತ್ ಅತಿಕ್ರಮಿಸಲಾಗಿದೆ. ಈ ಬಗ್ಗೆ ಹಲವು ಬಾರಿ ಮಹಾನಗರ ಪಾಲಿಕೆ ಮಾಲೀಕರ ಗಮನಕ್ಕೆ ತಂದಿದೆ ಎನ್ನಲಾಗ್ತಿದೆ. ಇಷ್ಟಾದರೂ ಕಾಮಗಾರಿ ಮುಂದುವರಿಸಿದ್ದ ಕಾರಣ ನೋಟಿಸ್ ಜಾರಿ ಮಾಡಲಾಗಿದೆ.

ಹು-ಧಾ ಮಹಾನಗರ ಪಾಲಿಕೆ ಆಯುಕ್ತರ ಪ್ರತಿಕ್ರಿಯೆ​

ಇದೊಂದೇ ಕಟ್ಟಡವಲ್ಲದೆ, ನಗರದ ಹಲವೆಡೆ ಅಕ್ರಮ ಕಾಮಗಾರಿಯ ವಿರುದ್ಧ ಪಾಲಿಕೆ ಸಮರಕ್ಕಳಿದಿದೆ. ನಮ್ಮ ಗಮನಕ್ಕೆ ಬರುವ ಅಕ್ರಮದ ವಿರುದ್ಧ ತಕ್ಷಣ ಕ್ರಮಕ್ಕೆ ಮುಂದಾಗುವುದಾಗಿ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ್ ಹೇಳಿದರು.

ನೋಟಿಸ್ ಪ್ರತಿ​

ಇದನ್ನೂ ಓದಿ:ಅವೈಜ್ಞಾನಿಕ ಕಾಮಗಾರಿ: ಮಳೆಗೆ ಕೊಚ್ಚಿ ಹೋದ ನಾರಾಯಣಪುರ ಬಲದಂಡೆ ಮುಖ್ಯ ನಾಲೆ ಲೈನಿಂಗ್

ABOUT THE AUTHOR

...view details