ಕರ್ನಾಟಕ

karnataka

ETV Bharat / state

ಮುಂಬೈನ ಚಿರತೆ ದಾಳಿ ವಿಡಿಯೋ ಹುಬ್ಬಳ್ಳಿಯಲ್ಲಿ ವೈರಲ್​​.. ಸೈಬರ್​​ ಠಾಣೆ ಮೊರೆ ಹೋದ ಅರಣ್ಯ ಇಲಾಖೆ.. - ಸೈಬರ್​​ ಠಾಣೆ ಮೊರೆ ಹೋದ ಅರಣ್ಯ ಇಲಾಖೆ

ಹುಬ್ಬಳ್ಳಿ-ಧಾರವಾಡದಲ್ಲಿ ಇತ್ತೀಚೆಗೆ ಚಿರತೆ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿತ್ತು. ಆದರೆ, ಕೆಲ ಕಿಡಿಗೇಡಿಗಳು ಮುಂಬೈನ ವಿಡಿಯೊವೊಂದನ್ನ ಹುಬ್ಬಳ್ಳಿಯಲ್ಲಿ ಚಿರತೆ ನಡೆಸಿರುವ ದಾಳಿ ಎಂಬಂತೆ ಚಿತ್ರಿಸಿ ಶೇರ್ ಮಾಡಿ ಆತಂಕ ಇನ್ನಷ್ಟು ಹೆಚ್ಚಾಗಲು ಕಾರಣರಾಗಿದ್ದಾರೆ..

mumbai-leopard-attack-video-goes-viral-in-hubballi
ಮುಂಬೈ ಚಿರತೆ ದಾಳಿ ವಿಡಿಯೋ ಹುಬ್ಬಳ್ಳಿಯಲ್ಲಿ ವೈರಲ್

By

Published : Oct 1, 2021, 2:33 PM IST

ಹುಬ್ಬಳ್ಳಿ :ಧಾರವಾಡ ಜಿಲ್ಲೆಯಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ತಿರುವ ಪಡೆದಿದೆ. ಮುಂಬೈನ ಗೋರೆಗಾಂವ್​ನಲ್ಲಿ ನಡೆದಿದ್ದ ಪ್ರಕರಣವನ್ನು ಹುಬ್ಬಳ್ಳಿಯಲ್ಲಿ ನಡೆದಿದೆ ಎಂದು ಹರಡಲಾಗುತ್ತಿದೆ.

ಈ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿ ಸೈಬರ್ ಕ್ರೈಂ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಹುಬ್ಬಳ್ಳಿ ಜನತೆ ಆತಂಕಿತರಾಗಿದ್ದಾರೆ. ಮನೆಯಿಂದ ಹೊರ ಬರಲು ಸಹ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮುಂಬೈ ಚಿರತೆ ದಾಳಿ ವಿಡಿಯೋ ಹುಬ್ಬಳ್ಳಿಯಲ್ಲಿ ವೈರಲ್..

ಮುಂಬೈನಲ್ಲಿ ನಡೆದಿದ್ದ ಈ ದಾಳಿಯನ್ನ ಬೂದನಗುಡ್ಡದಲ್ಲಿ ಮಹಿಳೆ ಮೇಲೆ ನಡೆದ ದಾಳಿ ಎಂದು ಹರಡಲಾಗುತ್ತಿದೆ. ಈ ಹಿನ್ನೆಲೆ ಸೈಬರ್ ಕ್ರೈಂ ಠಾಣೆಗೆ ದೂರು ನೀಡಲು ಅರಣ್ಯ ಇಲಾಖೆಮುಂದಾಗಿದೆ.

ಇದನ್ನೂ ಓದಿ:ಬದುಕಿತು ಬಡ ಜೀವ.. ಚಿರತೆ ದಾಳಿಯಿಂದ ಪಾರಾದ ಮಹಿಳೆ: ವಿಡಿಯೋ

ABOUT THE AUTHOR

...view details