ಭಾರತೀಯ ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು; ಶಾಸಕ ಅಬ್ಬಯ್ಯ - ಶಿಕ್ಷಕರಿಗೆ ಸನ್ಮಾನ
ಪ್ರತಿಯೊಂದು ಯಶಸ್ಸಿನ ಹಿಂದೆ ಶಿಕ್ಷಕರ ಬೆಂಬಲವೇ ಶ್ರೀರಕ್ಷೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಭಾರತ ಸಾಕಷ್ಟು ಬಲಿಷ್ಠ ರಾಷ್ಟ್ರವಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ಭಾರತದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
![ಭಾರತೀಯ ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು; ಶಾಸಕ ಅಬ್ಬಯ್ಯ mla prasad abbaiah speech in teachers day](https://etvbharatimages.akamaized.net/etvbharat/prod-images/768-512-8690891-270-8690891-1599313434746.jpg)
ಶಿಕ್ಷಕರ ದಿನಾಚರಣೆ
ಹುಬ್ಬಳ್ಳಿ:ದೇಶದಲ್ಲಿ ನಾವೆಲ್ಲ ಏನಾದರೂ ಒಂದು ಸಾಧನೆ ಮಾಡಿದ್ದೇವೆ ಅಂದರೆ ಅದಕ್ಕೆ ಶಿಕ್ಷಕರೇ ಕಾರಣಕರ್ತರು. ಪ್ರತಿಯೊಂದು ಯಶಸ್ಸಿನ ಹಿಂದೆ ಶಿಕ್ಷಕರ ಬೆಂಬಲವೇ ಶ್ರೀರಕ್ಷೆ ಎಂದು ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಶಿಕ್ಷಕರ ಪರಿಸ್ಥಿತಿ ಕೂಡ ತುಂಬಾ ಗಂಭೀರವಾಗಿದೆ. ಸುಮಾರು ವರ್ಷಗಳಿಂದ ಅರೆಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವ ಎಷ್ಟೋ ಶಿಕ್ಷಕರ ನೇಮಕಾತಿ ಇಂದಿಗೂ ಘೋಷಣೆಯಾಗಿಲ್ಲ. ಅವರು ಇಂದಿಗೂ ಕೂಡ ಸಾಕಷ್ಟು ಹೋರಾಟ ನಡೆಸುತ್ತಿದ್ದಾರೆ ಎಂದು ಶಾಸಕ ಅಬ್ಬಯ್ಯ ಹೇಳಿದರು. ಇದೇ ವೇಳೆ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಬಿಇಒ ಶ್ರೀಶೈಲ ಕರಿಕಟ್ಟಿ, ಪ್ರಲ್ಹಾದ ಗೆಜ್ಜೆ, ಎಂ.ಎಚ್. ಜಂಗಳಿ, ಬಿ.ಕೆ. ಮಲಗಿ ಸೇರಿದಂತೆ ಇತರರು ಇದ್ದರು.