ಕರ್ನಾಟಕ

karnataka

ETV Bharat / state

ಕಚೇರಿಗೆ ಬರುವವರನ್ನು ಗದರಿಸಬೇಡಿ.. ಅಧಿಕಾರಿಗಳಿಗೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ‌ ಎಚ್ಚರಿಕೆ.. - Shankara Patil Munenakoppa warned officials in dharwada

ಎಲ್ಲರಿಗೂ ಓದು-ಬರಹ ಬರುವುದಿಲ್ಲ. ರೈತರಿಗೆ ಎಲ್ಲ ನೀತಿ-ನಿಯಮ ಗೊತ್ತಿರುವುದಿಲ್ಲ. ಅವರಿಗೆ ತಿಳಿ ಹೇಳಿ ಸ್ಪಂದಿಸಬೇಕು. ಇದು ಜಿಲ್ಲೆಯ ಎಲ್ಲ ಅಧಿಕಾರಿಗಳಿಗೂ ಅನ್ವಯ. ಯಾರೋ ಒಬ್ಬ ಅಧಿಕಾರಿಯಿಂದ ಎಲ್ಲರಿಗೂ ಕೆಟ್ಟ ಹೆಸರು ಬರುವುದು ಬೇಡ. ಕಚೇರಿಗೆ ಬಂದವರಿಗೆ ಸ್ಪಂದಿಸುವ ಕೆಲಸ ಮಾಡಿ ಎಂದು ಕ್ಲಾಸ್ ತೆಗೆದುಕೊಂಡರು..

minister-shankara-patil-munenakoppa
ಸಚಿವ ಶಂಕರ ಪಾಟೀಲ ಮುನೇನಕೊಪ್ಪ‌

By

Published : Sep 27, 2021, 7:35 PM IST

ಧಾರವಾಡ :ಸರ್ಕಾರಿ ಕಚೇರಿಗೆ ಬರುವವರನ್ನು ಗದರಿಸಬೇಡಿ ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ‌ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ‌..

ಧಾರವಾಡದ ಜಿಪಂ ಸಭಾಂಗಣದಲ್ಲಿ ನಡೆದ ಮೊದಲನೇ ತ್ರೈಮಾಸಿಕ ಕೆಡಿಪಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಅವರು ಎಚ್ಚರಿಕೆ ನೀಡಿ, ಫುಲ್ ಕ್ಲಾಸ್ ತೆಗೆದುಕೊಂಡರು. ಕಚೇರಿಗೆ ಬರುವವರಿಗೆ ಹೊರಗೆ ಹೋಗು ಅಂತಾ ಯಾಕೆ ಹೇಳ್ತೀರಿ?.

ರೈತರು, ಜನಸಾಮಾನ್ಯರು ಬಂದಾಗ ಗದರಿಸಬೇಡಿ. ನಿಮ್ಮದು ನೀತಿ ನಿಯಮಗಳ ಪ್ರಕಾರ ಕೆಲಸ ಮಾಡುವುದು ಆಗಬೇಕು. ಆದರೆ, ಕಚೇರಿಗೆ ಬಂದವರಿಗೆ ಹೊರಗೆ ಹೋಗಿ ಎಂದರೆ ಹೇಗೆ? ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.

ಅಪಘಾತದಲ್ಲಿ ಬಿದ್ದಿದ್ದ ಬೈಕ್

ಎಲ್ಲರಿಗೂ ಓದು-ಬರಹ ಬರುವುದಿಲ್ಲ. ರೈತರಿಗೆ ಎಲ್ಲ ನೀತಿ-ನಿಯಮ ಗೊತ್ತಿರುವುದಿಲ್ಲ. ಅವರಿಗೆ ತಿಳಿ ಹೇಳಿ ಸ್ಪಂದಿಸಬೇಕು. ಇದು ಜಿಲ್ಲೆಯ ಎಲ್ಲ ಅಧಿಕಾರಿಗಳಿಗೂ ಅನ್ವಯ. ಯಾರೋ ಒಬ್ಬ ಅಧಿಕಾರಿಯಿಂದ ಎಲ್ಲರಿಗೂ ಕೆಟ್ಟ ಹೆಸರು ಬರುವುದು ಬೇಡ. ಕಚೇರಿಗೆ ಬಂದವರಿಗೆ ಸ್ಪಂದಿಸುವ ಕೆಲಸ ಮಾಡಿ ಎಂದು ಕ್ಲಾಸ್ ತೆಗೆದುಕೊಂಡರು. ಸಭೆಗೆ ಬಾರದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನೋಟಿಸ್​ ನೀಡುವಂತೆ ಅವರು ಸೂಚಿಸಿದರು.

ಬೈಕ್ ಸವಾರರನನ್ನು ಉಪಚರಿಸಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ‌

ಮಾನವೀಯತೆ ಮೆರೆದ ಸಚಿವರು :ಲಾರಿಯೊಂದಕ್ಕೆ ಡಿಕ್ಕಿ ಹೊಡೆದು ನರಳುತ್ತಿದ್ದ ಬೈಕ್ ಸವಾರನನ್ನ ಉಪಚರಿಸಿ ಆಸ್ಪತ್ರೆಗೆ ರವಾನೆ ಮಾಡಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ‌ ಮಾನವೀಯತೆ ಮೆರೆದಿದ್ದಾರೆ.

ಹುಬ್ಬಳ್ಳಿಯ ಹೊರವಲಯದಲ್ಲಿರುವ ತಾರಿಹಾಳ ಬೈಪಾಸ್ ಹತ್ತಿರ ನಡೆದ ಲಾರಿ ಹಾಗೂ ಬೈಕ್ ಅಪಘಾತದಲ್ಲಿ ಬೈಕ್ ಸವಾರ ಆಯತಪ್ಪಿ ಹೈವೇ ಪಕ್ಕದ ರಸ್ತೆಯಲ್ಲಿ ಬಿದ್ದಿದ್ದರು. ಈ ಸಂದರ್ಭದಲ್ಲಿ ಧಾರವಾಡಕ್ಕೆ ಹೊರಟಿದ್ದ ಸಚಿವರು, ತಮ್ಮ ವಾಹನ ನಿಲ್ಲಿಸಿ ಬೈಕ್ ಸವಾರನಿಗೆ ನೀರಿನ ಬಾಟಲ್ ನೀಡಿ ಧೈರ್ಯ ಹೇಳಿ, ಸವಾರನ ಆರೋಗ್ಯ ವಿಚಾರಿಸಿದರು.

ಸಚಿವ ಮುನೇನಕೊಪ್ಪ ಮಾನವೀಯತೆ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರದೀಪ್ ಶೆಟ್ಟರ್ ಇದ್ದರು.

ಓದಿ:ನಾನು ಮತ್ತೆ ಸಿಎಂ ಆದಲ್ಲಿ ರಾಜ್ಯವನ್ನ ಅಭಿವೃದ್ಧಿ ಪಥದತ್ತ ಸಾಗುವಂತೆ ಮಾಡುತ್ತೇನೆ : ಸಿದ್ದರಾಮಯ್ಯ

ABOUT THE AUTHOR

...view details