ಹುಬ್ಬಳ್ಳಿ :ಬಿಜೆಪಿಯಿಂದ ರಾಜ್ಯಸಭೆಗೆ ಈರಣ್ಣ ಕಡಾಡಿ, ಅಶೋಕ ಗಸ್ತಿಗೆ ಟಿಕೆಟ್ ನೀಡಿದ್ದಕ್ಕೆ ನಮಗ್ಯಾರಿಗೂ ಬೇಸರವಿಲ್ಲ ಎಂದು ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಈರಣ್ಣ, ಅಶೋಕ ಗಸ್ತಿಗೆ ಟಿಕೆಟ್ ನೀಡಿದ್ದಕ್ಕೆ ಬೇಸರವಿಲ್ಲ: ಸಚಿವ ಶೆಟ್ಟರ್ - jaggdish shetter statement
ಬಿಜೆಪಿಯಲ್ಲಿ ರಾಜ್ಯ ಹಾಗೂ ಕೇಂದ್ರ ಕಮಿಟಿ ಎರಡೂ ಒಂದೇ. ಇಲ್ಲಿ ಯಾರ ಕೈ ಮೇಲೂ ಆಗಿಲ್ಲ ಯಾರ ಕೈ ಕೆಳಗೂ ಆಗಿಲ್ಲ. ನಮ್ಮ ಪಕ್ಷದ ನಾಯಕರೇ ಟಿಕೆಟ್ ನೀಡಿದ್ದಾರೆ. ನಾನು ಈಗಾಗಲೆ ಪ್ರಭಾಕರ್ ಕೊರೆಯವರ ಜೊತೆ ಮಾತನಾಡಿದ್ದೇನೆ, ಅವರು ಯಾವುದೇ ರೀತಿ ಬೇಸರ ವ್ಯಕ್ತಪಡಿಸಿಲ್ಲ ಎಂದು ಸಚಿವ ಜದೀಶ್ ಶೆಟ್ಟರ್ ತಿಳಿಸಿದರು.

ನಗರದಲ್ಲಿ ಮಾತನಾಡಿದ ಅವರು, ಇಲ್ಲಿ ರಾಜ್ಯ ಹಾಗೂ ಕೇಂದ್ರ ಕಮೀಟಿ ಎರಡೂ ಒಂದೇ. ಇಲ್ಲಿ ಯಾರ ಕೈ ಮೇಲೂ ಆಗಿಲ್ಲ ಯಾರ ಕೈ ಕೆಳಗೂ ಆಗಿಲ್ಲ. ನಮ್ಮ ಪಕ್ಷದ ನಾಯಕರೇ ಟಿಕೆಟ್ ನೀಡಿದ್ದಾರೆ. ನಾನು ಈಗಾಗಲೇ ಪ್ರಭಾಕರ್ ಕೊರೆಯವರ ಜೊತೆ ಮಾತನಾಡಿದ್ದೇನೆ. ಅವರು ಯಾವುದೇ ರೀತಿ ಬೇಸರ ವ್ಯಕ್ತಪಡಿಸಿಲ್ಲ. ಮುಂದಿನ ದಿನಗಳಲ್ಲಿ ಅವರಿಗೆ ಯಾವ ಸ್ಥಾನಮಾನ ನೀಡಬೇಕು ಎನ್ನುವ ಬಗ್ಗೆ ಯೋಚನೆ ಮಾಡುತ್ತೇವೆ ಎಂದರು.
ಹು - ಧಾ ಅವಳಿ ನಗರದಲ್ಲಿನ ನಗರಾಭಿವೃದ್ಧಿ ಇಲಾಖೆ ಕಾಮಗಾರಿಗಳ ಬಗ್ಗೆ ತೃಪ್ತಿ ಇಲ್ಲ ಎನ್ನುವ ಬೈರತಿ ಬಸವರಾಜ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರ ಹತ್ತಿರ ಅಧಿಕಾರವಿದೆ. ಅವರು ತನಿಖೆ ನಡೆಸಲಿ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸಚಿವ ಬೈರತಿ ಬಸವರಾಜ್ ವಿರುದ್ಧ ಕಿಡಿಕಾರಿದರು.