ETV Bharat Karnataka

ಕರ್ನಾಟಕ

karnataka

ETV Bharat / state

ಮೇಕೆದಾಟು ಯೋಜನೆಯಲ್ಲಿ ತಮಿಳುನಾಡು ವಿನಾಕಾರಣ ಅಡ್ಡಿ: ಸಚಿವ ಗೋವಿಂದ್ ಕಾರಜೋಳ - ಸಚಿವ ಗೋವಿಂದ್ ಕಾರಜೋಳ

ಮೇಕೆದಾಟು ಯೋಜನೆಯಲ್ಲಿ ನಾವು ಹೆಚ್ಚಿನ ನೀರನ್ನು ತೆಗೆದುಕೊಳ್ಳುತ್ತಿಲ್ಲ. ಕುಡಿಯುವ ನೀರಿಗಾಗಿ ಸುಪ್ರೀಂಕೋರ್ಟ್​​ ಈಗಾಗಲೇ ಆದೇಶ ನೀಡಿದೆ ಎಂದರು.

Minister Govinda karajol
Minister Govinda karajol
author img

By

Published : Sep 5, 2021, 12:35 AM IST

ಹುಬ್ಬಳ್ಳಿ :ನಾವು ಕುಡಿಯೋದಕ್ಕೆ ನೀರು ಕೇಳ್ತಾ ಇದೀವಿ, ಹೊರತು ಕೃಷಿಗಾಗಿ ಅಲ್ಲ. ಮೇಕೆದಾಟು ಯೋಜನೆಯಲ್ಲಿ ತಮಿಳುನಾಡು ಸರ್ಕಾರ ವಿನಾಕಾರಣ ಅಡ್ಡಿ ಪಡಿಸುತ್ತಿದೆ ಎಂದು ರಾಜ್ಯದ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆಯಲ್ಲಿ ನಾವು ಹೆಚ್ಚಿನ ನೀರನ್ನು ತೆಗೆದುಕೊಳ್ಳುತ್ತಿಲ್ಲ. ಕುಡಿಯುವ ನೀರಿಗಾಗಿ ಸುಪ್ರೀಂಕೋರ್ಟ್​​ ಈಗಾಗಲೇ ಆದೇಶ ನೀಡಿದೆ. ನಾವು ನೀರು ಕೇಳುತ್ತಿರುವುದು ಕುಡಿಯುವುದಕ್ಕಾಗಿ ಹೊರತು, ಕೃಷಿಗಾಗಿ ಅಲ್ಲ. ಆದರೆ ತಮಿಳುನಾಡು ವಿನಾಕಾರಣ ಇದಕ್ಕೆ ಅಡ್ಡಿ ಪಡಿಸ್ತಿದೆ ಎಂದರು.

ಮೇಕೆದಾಟು ಬಗ್ಗೆ ಗೋವಿಂದ್ ಕಾರಜೋಳ ಮಾತು

ಈಗಾಗಲೇ ತಮಿಳುನಾಡಿನವರು ಪಿಐಎಲ್ ಹಾಕಿದ್ದಾರೆ. ನಾವು ಕೂಡ ಹಾಕಿದೀವಿ.ಇದನ್ನ ಕೂಡಲೇ ಇತ್ಯರ್ಥ ಪಡಿಸಲಿಕ್ಕೆ ಸುಪ್ರೀಂಕೋರ್ಟ್​ನಲ್ಲಿ ನಾವು ಕಾನೂನು ಪ್ರಕಾರ ಹೋರಾಟ ಮಾಡ್ತೀವಿ ಎಂದರು.

ಇದನ್ನೂ ಓದಿರಿ: ಕೋವಿಡ್​​-19: ಗಡಿ ಭಾಗದ ಜಿಲ್ಲೆಗಳಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲು ಸಿಎಂ ಬೊಮ್ಮಾಯಿ ಸೂಚನೆ

ಕಳಸಾ-ಬಂಡೂರಿ ಯೋಜನೆಯಲ್ಲಿ ನಮಗೆ 13 ಟಿಎಂಸಿ ನೀರು ಸಿಕ್ಕಿದೆ. ಅದರಲ್ಲಿ 5.4 ಟಿಎಂಸಿ ನೀರು ಕುಡಿಯೋದಕ್ಕೆ ಮತ್ತು ಉಳಿದದ್ದು ವಿದ್ಯುತ್ ಉತ್ಪಾದನೆಗೆ ಬಳಕೆಯಾಗುತ್ತೆ. ಕಳಸಾ ಬಂಡೂರಿ ಯೋಜನೆಗೆ ಎನ್ವಿರಾನಮೆಂಟ್ ಮತ್ತು ಫಾರೆಸ್ಟ್ ಕ್ಲಿಯರೆನ್ಸ್ 2015 ರಲ್ಲೇ ಆಗಿದೆ. ಆದರೆ ಈ ಯೋಜನೆ ಕುರಿತು ಗೋವಾ ಮತ್ತು ಮಹಾರಾಷ್ಟ್ರ ಪಿಐಎಲ್ ಸಲ್ಲಿಸಿದ್ದಾರೆ. ನಾವು ಕೂಡ ಸಲ್ಲಿಸಿದ್ದೇವೆ. ಅದಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಯಾಗದಂತೆ ಜಾರಿಗೆ ತರುವಲ್ಲಿ ಕೇಂದ್ರ ಸರ್ಕಾರ ಮದ್ಯಸ್ಥಿಕೆ ವಹಿಸಿ ಒಪ್ಪಿಗೆ ನೀಡಬೇಕೆಂದು ಕೇಂದ್ರಕ್ಕೆ ಒತ್ತಾಯ ಮಾಡುತ್ತೇನೆಂದು ಕಾರಜೋಳ ಹೇಳಿದರು.

ABOUT THE AUTHOR

...view details