ಧಾರವಾಡ :ಅಮಿತ್ ಷಾ ಭೇಟಿ ಬಗ್ಗೆ ಶಾಸಕ ಅರವಿಂದ ಬೆಲ್ಲದ್ ಪ್ರತಿಕ್ರಿಯಿಸಿದ್ದಾರೆ. ನಾನು ಸಚಿವ ಸ್ಥಾನದ ಲಾಬಿಗಾಗಿ ಭೇಟಿ ಮಾಡಿಲ್ಲ. ನಾನು 6 ತಿಂಗಳ ಹಿಂದೆಯೇ ಭೇಟಿಯಾಗಲು ಸಮಯ ಕೇಳಿದ್ದೆ. ಅದಕ್ಕೆ ಶಾ ಅವರು ನನ್ನನ್ನ ಕರೆದಿದ್ದರು ಎಂದು ಸ್ಪಷ್ಟನೆ ನೀಡಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಭೇಟಿಗೆ ಅವಕಾಶ ಕೇಳಿದ್ದೆ ಅದಕ್ಕೆ ಕರೆದಿದ್ದರು. ಸಚಿವ ಸ್ಥಾನದ ಲಾಬಿಗಾಗಿ ನಾನು ವಿಶೇಷ ಸಂದರ್ಭ ಭೇಟಿ ಕೇಳಿಲ್ಲ. ಏಕಾಏಕಿ ಒಂದು ದಿನ ಮುಂಚೆಯೇ ಬರುವಂತೆ ಹೇಳಿದ್ದರು. ಭೇಟಿಯಲ್ಲಿ ಪ್ರಸಕ್ತ ರಾಜ್ಯದ ಸ್ಥಿತಿಗತಿ ಬಗ್ಗೆ ಚರ್ಚೆ ಮಾಡಿದರು ಎಂದರು.