ಕರ್ನಾಟಕ

karnataka

By

Published : May 18, 2020, 3:25 PM IST

ETV Bharat / state

ಬೈಕ್​​ಗೆ ಟಿಪ್ಪರ್ ಲಾರಿ ಡಿಕ್ಕಿ: ದ್ವಿಚಕ್ರ ವಾಹನ ​ ಸವಾರ ದುರ್ಮರಣ

ಹುಬ್ಬಳ್ಳಿಯ ಕಲಘಟಗಿಯ ನೀರಸಾಗರ ಕ್ರಾಸ್ ಬಳಿ ಬೈಕ್​​ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್​ ಸವಾರ ಮೃತಪಟ್ಟಿದ್ದಾರೆ.

man died in  lorry and byke accident at hubli
ಬೈಕ್​ ಸವಾರ ದುರ್ಮರಣ

ಹುಬ್ಬಳ್ಳಿ:ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತ ಪಟ್ಟಿರುವ ಘಟನೆ ಕಲಘಟಗಿಯ ನೀರಸಾಗರ ಕ್ರಾಸ್ ಬಳಿ ನಡೆದಿದೆ.

ಬೈಕ್​ ಸವಾರ ದುರ್ಮರಣ

ಹನುಮಂತಪ್ಪ ಬಸವಂತಪ್ಪ ಸಾವಂತನವರ(47) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಟಿಪ್ಪರ್ ಲಾರಿಯೊಂದು ಕಲ್ಲು ತುಂಬಿಕೊಂಡು ಧಾರವಾಡ ಕಡೆಯಿಂದ ಕಲಘಟಗಿ ಹೊರಟಿದ್ದು, ಬೈಕ್​​ಗೆ ಡಿಕ್ಕಿ ಹೊಡೆದಿದೆ. ಅಪಘಾತ ನಂತರ ಟಿಪ್ಪರ್​ ಲಾರಿ ಚಾಲಕ ಪರಾರಿಯಾಗಿದ್ದಾರೆ.

ಗಾಯಾಳು ಹನುಮಂತಪ್ಪ ಬಸವಂತಪ್ಪ ಸಾವಂತನವರ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದು, ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details