ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ: ಸೆಲ್ಫಿ ತೆಗೆದುಕೊಳ್ಳಲು ಹೋಗಿ‌ ನೀರುಪಾಲಾಗಿದ್ದ ಮತ್ತೊಬ್ಬ ಯುವಕನ ಶವ ಪತ್ತೆ - ಹುಬ್ಬಳ್ಳಿಯಲ್ಲಿ ಕೆನಾಲ್​ನಲ್ಲಿ ಮುಳುಗಿ ಮೂವರ ಸಾವು

ಕಿರೇಸೂರು ಬ್ರಿಡ್ಜ್‌ ಬಳಿ ಪೊಟೋಶೂಟ್ ಮಾಡುವಾಗಿ ನೀರುಪಾಲಾಗಿದ್ದ ಮೂವರ ಯುವಕರ ಪೈಕಿ ಇಂದು ಮತ್ತೋರ್ವ ಯುವಕನ ಶವ ಪತ್ತೆಯಾಗಿದೆ.

man deadbody found in river
ಮತ್ತೋರ್ವ ಯುವಕನ ಶವ ಪತ್ತೆ

By

Published : Jan 24, 2021, 11:25 AM IST

ಹುಬ್ಬಳ್ಳಿ:ಫೋಟೋಶೂಟ್​ಗೆ ಹೋಗಿ ತಾಲೂಕಿನ ಕಿರೇಸೂರು ಕಾಲುವೆಯಲ್ಲಿ ಬಿದ್ದಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆಯಾಗಿದೆ.

ಕಳೆದ ಮೂರು ದಿನಗಳ ಹಿಂದೆ ಓರ್ವ ಯುವತಿ ಸೇರಿದಂತೆ ಐವರು ಕಿರೇಸೂರು ಬ್ರಿಡ್ಜ್‌ ಬಳಿ ಫೋಟೋಶೂಟ್​ಗೆ ತೆರಳಿದ್ದರು. ಆಗ ಹೆಜ್ಜೇನು ದಾಳಿ ಮಾಡಿದ ಕಾರಣ ಅದರಿಂದ ತಪ್ಪಿಸಿಕೊಳ್ಳಲು ಹೋಗಿ ಕಾಲುವೆಯಲ್ಲಿ ಬಿದ್ದಿದ್ದರು.

ನೀರಿನಲ್ಲಿ ಮುಳುಗುತ್ತಿದ್ದ ಯುವತಿ ನತಾಶಾಳನ್ನು ಕುರಿಗಾಹಿಗಳು ರಕ್ಷಣೆ ಮಾಡಿದ್ದಾರೆ. ಮೂವರು ಯುವಕರ ಪೈಕಿ ಅಗ್ನಿ ಶಾಮ‌ಕ ಸಿಬ್ಬಂದಿಯ ನಿರಂತರ ಶೋಧದಿಂದ ನಿನ್ನೆ ಸನ್ನಿ ಜಾನ್ಸನ್​​ ಕಲ್ಲಕುಂಟ್ಲ ಹಾಗೂ ಗಜಾನನ ರಾಜಶೇಖರ ಮೃತದೇಹಗಳು ಪತ್ತೆಯಾಗಿದ್ದವು. ಇಂದು ಬೆಳಗ್ಗೆ ಮತ್ತೆ ಕಾರ್ಯಾಚರಣೆಗೆ ಇಳಿದ ಅಗ್ನಿಶಾಮಕ ಸಿಬ್ಬಂದಿಗೆ ಜೋಶಿ ಕ್ಲೆಮೆಂಟ್ ಯುವಕನ ಶವ ದೊರಕಿದೆ.

ಕೆನಾಲ್​​ನಲ್ಲಿರುವ ಟರ್ನಲ್​ನಲ್ಲಿ ಯುವಕನ ದೇಹ ಸಿಲುಕಿಕೊಂಡಿತ್ತು. ಕೆಸರಿನಲ್ಲಿ ಸಿಲುಕಿಕೊಂಡಿದ್ದ ಶವವನ್ನು ಈಗ ಹೊರತಗೆಯಲಾಗಿದೆ‌. ನೀರಿನಲ್ಲಿ ಮುಳುಗಿದ್ದ ಮೂವರ ಶವಗಳು ಸಿಕ್ಕಿದ್ದು, ಮೂರು ದಿನಗಳ ಶೋಧ ಕಾರ್ಯಾಚರಣೆ ಮುಕ್ತಾಯಗೊಂಡಿದೆ.

ಇದನ್ನೂ ಓದಿ:ಸೆಲ್ಫಿ ಕ್ರೇಜ್​ಗೆ ಮೂವರು ಕಾಲುವೆ ಪಾಲು: ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ

ABOUT THE AUTHOR

...view details