ಕರ್ನಾಟಕ

karnataka

By

Published : Jul 14, 2021, 1:23 PM IST

ETV Bharat / state

ಮಹಾರಾಷ್ಟ್ರದಲ್ಲಾಗುವ ಮಳೆಯಿಂದ ಆತಂಕ: ಡಾ.‌ಆರ್.ಎಚ್. ಪಾಟೀಲ

ಮಧ್ಯ ಮಹಾರಾಷ್ಟ್ರ ಮತ್ತು ಕೊಂಕಣ ಗೋವಾ ಪ್ರದೇಶದಲ್ಲಿ ಮಳೆ ಹೆಚ್ಚಿದ್ದು, ನದಿಗಳಿಗೆ ನೀರಿನ ಒಳ ಹರಿವು ಹೆಚ್ಚಾಗಲಿದೆ. ಇದರಿಂದ ಆತಂಕ ಎದುರಾಗಬಹುದು ಎಂದು ಕೃವಿವಿ ಹವಾಮಾನ ಕೇಂದ್ರದ ಮುಖ್ಯಸ್ಥ ಡಾ.‌ಆರ್.ಎಚ್. ಪಾಟೀಲ ಹೇಳಿದ್ದಾರೆ.

rain
ಮಳೆ

ಧಾರವಾಡ: ನಮ್ಮ ರಾಜ್ಯದಲ್ಲಿ ಮಳೆ ಕಡಿಮೆಯಾಗಲಿದೆ. ಆದರೆ ನೆರೆಯ ಮಹಾರಾಷ್ಟ್ರದಲ್ಲಾಗುವ ಮಳೆಯಿಂದ ಆತಂಕ ಎದುರಾಗಬಹುದು ಎಂದು ಕೃವಿವಿ ಹವಾಮಾನ ಕೇಂದ್ರದ ಮುಖ್ಯಸ್ಥ ಡಾ.‌ಆರ್.ಎಚ್. ಪಾಟೀಲ ಹೇಳಿದ್ದಾರೆ.

ಡಾ.‌ಆರ್.ಎಚ್. ಪಾಟೀಲ

ಈ ಕುರಿತು ಮಾತನಾಡಿರುವ ಅವರು, ಮಧ್ಯ ಮಹಾರಾಷ್ಟ್ರ ಮತ್ತು ಕೊಂಕಣ ಗೋವಾ ಪ್ರದೇಶದಲ್ಲಿ ಮಳೆ ಹೆಚ್ಚಿದೆ. ದಿನಾಂಕ 14, 15 ಮತ್ತು 16 ರವರೆಗೆ ಅಲ್ಲಿ ಹೆಚ್ಚು ಮಳೆಯಾಗಲಿದೆ. ಈಗಾಗಲೇ ಅಲ್ಲಿ ಆರೆಂಜ್ ಹಾಗೂ ರೆಡ್ ಅಲರ್ಟ್ ಘೋಷಣೆಯಾಗಿದೆ ಎಂದು ಹೇಳಿದ್ದಾರೆ.

ಕೊಲ್ಹಾಪುರ, ಸಾತಾರಾ, ಪುಣೆ, ರಾಯಘಡ, ರತ್ನಾಗಿರಿ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದೆ. ಮೂರು ದಿನ ರೆಡ್ ಅಲರ್ಟ್ ಇದೆ. ಜುಲೈ 17ರ ನಂತರ ಆರೆಂಜ್ ಮತ್ತು ಯಲ್ಲೋ ಅಲರ್ಟ್ ಇದೆ. ಅಲ್ಲಿ ಸಾಕಷ್ಟು ಮಳೆಯಾಗುತ್ತಿದೆ. ಹಾಗಾಗಿ ಗಡಿ ಭಾಗದ ನದಿಗಳ ಒಳ ಹರಿವು ಹೆಚ್ಚಳವಾಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಬೆಂಗಳೂರಲ್ಲಿ ಮಳೆ ಅವಾಂತರ: ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ವರುಣನ ಆರ್ಭಟ

ನಮ್ಮಲ್ಲಿ ಮಳೆ ಹೆಚ್ಚಿಲ್ಲ, ಹೀಗಾಗಿ ಪ್ರವಾಹ ಭೀತಿ ಕಡಿಮೆ. ಗಡಿ ಭಾಗದ ಎಲ್ಲ ನದಿಗಳು ತುಂಬಿ ಹರಿಯುವ ಪರಿಸ್ಥಿತಿಯಿದೆ. ಮಹಾರಾಷ್ಟ್ರದಿಂದ ನದಿಗಳಿಗೆ ನೀರಿನ ಒಳ ಹರಿವು ಹೆಚ್ಚಾಗಲಿದೆ. ಅದಕ್ಕಾಗಿ ಬೆಳಗಾವಿ ಜಿಲ್ಲಾಡಳಿತ ತಯಾರಿ ನಡೆಸಿದೆ ಎಂದು ಹೇಳಿದರು.

ABOUT THE AUTHOR

...view details