ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯ ಕೊರೊನಾ ವೈರಾಸ್ ವಿರುದ್ಧದ ಹೋರಾಟಕ್ಕೆ ತಮ್ಮದೆಯಾದ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಾ ಬಂದಿದೆ. ಈ ಮೂಲಕ ಕೊರೊನಾ ವಾರಿಯರ್ಸ್ ಗಳಿಗೆ ಜೀವ ರಕ್ಷಕ ಸಾಧನಗಳು ಹಾಗೂ ಉಪಕರಣಗಳನ್ನು ಸಿದ್ದಪಡಿಸುವ ಕೆಲಸ ಮಾಡುತ್ತಿದೆ.
ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ಅನುಕೂಲವಾಗುವ ನಿಟ್ಟಿನಲ್ಲೂ ರೈಲ್ವೆ ಪಿಪಿಇ (ವೈಯಕ್ತಿಕ ರಕ್ಷಣಾ ಸಾಧನ) ತಯಾರಿಸಲು ಪ್ರಾರಂಭಿಸಿದೆ.
ಉತ್ತಮ ಗುಣಮಟ್ಟದ ಪಿಪಿಇ ಉಪಕರಣಗಳ ತಯಾರಿಕೆಯನ್ನು ಪ್ರಾರಂಭಿಸಿದೆ. ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿನ ಎಸ್ಡಬ್ಲ್ಯುಆರ್ ಕಾರ್ಯಾಗಾರಗಳು ಉತ್ತಮ ಗುಣಮಟ್ಟದ ಪಿಪಿಇ ಸೂಟ್ಗಳನ್ನು ಯಶಸ್ವಿಯಾಗಿ ಪುನರಾವರ್ತಿಸಿವೆ. ಇಲ್ಲಿಯವರೆಗೆ ಎಸ್ಡಬ್ಲ್ಯುಆರ್ನ ಹುಬ್ಬಳ್ಳಿ ಕಾರ್ಯಾಗಾರವು 450 ಕವರಲ್ಗಳನ್ನು ತಯಾರಿಸಿದೆ ಮತ್ತು ಸ್ಥಾಪಿತ ಮಾನದಂಡಗಳ ಪ್ರಕಾರ ಮೈಸೂರು ಕಾರ್ಯಾಗಾರವು 200 ಕವರಲ್ಗಳನ್ನು ಪಿಪಿಇ ಸೂಟ್ಗಳನ್ನು ಕಟ್ಟುನಿಟ್ಟಾದ ಗುಣಮಟ್ಟದಲ್ಲಿ ತಯಾರಿಸಿದೆ.