ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಿಂದಲೇ ಲೋಕ ತಾಂತ್ರಿಕ ಜನತಾದಳ ಪಕ್ಷದ ಸದಸ್ಯತ್ವ ನೋಂದಣಿಗೆ ಚಾಲನೆ.. - ಲೋಕ ತಾಂತ್ರಿಕ ಜನತಾದಳ

2015ರಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಯು ಹಾಗೂ ಆರ್‌ಜೆಡಿ ಪಕ್ಷಗಳು ಸೇರಿ ಮಹಾಘಟಬಂಧನ ರಚಿಸಿ ನಿತೀಶ್‌ಕುಮಾರ್​ ನೇತೃತ್ವದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದ್ದರು. ನಂತರದ ದಿನಗಳಲ್ಲಿ ನಿತೀಶ್‌ ಘಟಬಂಧನ ತೊರೆದು ಮತ್ತೆ ಎನ್‌ಡಿಎ ಕೂಟ ಸೇರಿದ್ದರು. ಅಲ್ಲದೇ ಜಾತ್ಯಾತೀತ ಮನೋಭಾವನೆಯಿಂದ ಶರದ್​ ಯಾದವ್​ ನೇತೃತ್ವದಲ್ಲಿ ಲೋಕತಾಂತ್ರಿಕ ಪಕ್ಷ ಕಟ್ಟಿದ್ದರು.

Saleem MAdavura
ಸಲೀಂ ಮಾದವೂರ ಪತ್ರಿಕಾಗೋಷ್ಠಿ

By

Published : Jan 25, 2020, 1:10 PM IST

ಹುಬ್ಬಳ್ಳಿ :ಉತ್ತರ ಭಾರತದಲ್ಲಿ ಪ್ರಚಲಿತದಲ್ಲಿರುವ ಲೋಕ ತಾಂತ್ರಿಕ ಜನತಾದಳ ಪಕ್ಷ ಇದೀಗ ಕರ್ನಾಟಕದಲ್ಲೂ ಚಿಗುರಲಿದೆ. ಎನ್‌ಆರ್‌ಸಿ ವಿರೋಧಿಸಿ ಪ್ರತಿಭಟನೆ ಮುಖಾಂತರ ಹುಬ್ಬಳ್ಳಿಯಲ್ಲಿ ಸದಸ್ಯತ್ವ ಅಭಿಯಾನ ಪ್ರಾರಂಭಿಸಲಾಗುವುದು ಎಂದು ಪಕ್ಷದ ಮುಖಂಡ ಸಲೀಂ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2015ರಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಯು ಹಾಗೂ ಆರ್‌ಜೆಡಿ ಪಕ್ಷಗಳು ಸೇರಿ ಮಹಾಘಟಬಂಧನ ರಚಿಸಿ ನಿತೀಶ್‌ಕುಮಾರ್​ ನೇತೃತ್ವದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದ್ದರು. ನಂತರದ ದಿನಗಳಲ್ಲಿ ನಿತೀಶ್‌ ಘಟಬಂಧನ ತೊರೆದು ಮತ್ತೆ ಎನ್‌ಡಿಎ ಕೂಟ ಸೇರಿದ್ದರು. ಅಲ್ಲದೇ ಜಾತ್ಯಾತೀತ ಮನೋಭಾವನೆಯಿಂದ ಶರದ್​ ಯಾದವ್​ ನೇತೃತ್ವದಲ್ಲಿ ಲೋಕತಾಂತ್ರಿಕ ಪಕ್ಷ ಕಟ್ಟಿದ್ದರು ಎಂದರು.

ಹುಬ್ಬಳ್ಳಿಯಿಂದಲೇ ಲೋಕ ತಾಂತ್ರಿಕ ಜನತಾದಳ ಪಕ್ಷದ ಸದಸ್ಯತ್ವ ಅಭಿಯಾನ..

ಈಗಾಗಲೇ ಉತ್ತರ ಭಾರತದ ರಾಜ್ಯಗಳಲ್ಲಿ ಪ್ರಚಲಿತದಲ್ಲಿರುವ ಲೋಕತಾಂತ್ರಿಕ ಪಕ್ಷ ಉತ್ತರ ಭಾರತ, ಕೇರಳದಲ್ಲಿ ಪ್ರಾರಂಭಗೊಂಡಿದೆ. ಇದೀಗ ಕರ್ನಾಟಕದಲ್ಲಿ ಬೆಂಗಳೂರಿನಿಂದ ಪಕ್ಷ ಸಂಘಟನೆ ಕಾರ್ಯ ನಡೆಯುತ್ತಿದೆ. 2ನೇ ಹಂತವಾಗಿ ಹುಬ್ಬಳ್ಳಿಯಿಂದ ಸಂಯುಕ್ತ ಜನತಾದಳದ ಜತೆಗೆ ಸದಸ್ಯ ನೋಂದಣಿ ಕಾರ್ಯ ಪ್ರಾರಂಭಗೊಳ್ಳಲಿದೆ ಎಂದರು.

ಅಲ್ಲದೇ ಹುಬ್ಬಳ್ಳಿಯಲ್ಲಿ ಎನ್‌ಆರ್‌ಸಿ ವಿರೋಧಿಸಿ ಪ್ರತಿಭಟನೆ ಮುಖಾಂತರ ಸದಸ್ಯತ್ವ ಅಭಿಯಾನ ಮಾಡಲಾಗುತ್ತದೆ ಎಂದು ತಿಳಿಸಿದರು.

ABOUT THE AUTHOR

...view details