ಕರ್ನಾಟಕ

karnataka

ಉಗಾಂಡಾ ಮೂಲದ ಕವಿವಿ ಸಂಶೋಧನಾ ವಿದ್ಯಾರ್ಥಿ ನಾಪತ್ತೆ, ಪೊಲೀಸರಿಗೆ ದೂರು

ಕರ್ನಾಟಕ ವಿವಿಯಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದ ಉಗಾಂಡಾ ಮೂಲದ ವಿದ್ಯಾರ್ಥಿ ನಾಪತ್ತೆಯಾಗಿದ್ದಾರೆ.

By

Published : Oct 27, 2022, 5:52 PM IST

Published : Oct 27, 2022, 5:52 PM IST

Updated : Oct 27, 2022, 6:35 PM IST

ಕವಿವಿ ಸಂಶೋಧನಾ ವಿದ್ಯಾರ್ಥಿ ಉಗಾಂಡಾದ ಜಿಯೋಲ್
kud-research student from ugandaEtv Bharat

ಧಾರವಾಡ: ಕರ್ನಾಟಕ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ಉಗಾಂಡಾ ಮೂಲದ ಜಿಯೋಲ್ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಲಸಚಿವ ಯಶಪಾಲ್ ಕ್ಷೀರಸಾಗರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಉಗಾಂಡಾ ಹೈಕಮಿಷನ್‌ಗೂ ವಿವಿ ಪತ್ರ ಬರೆದು ಮಾಹಿತಿ ರವಾನಿಸಿದೆ. ತತ್ವಶಾಸ್ತ್ರ ವಿಭಾಗದಲ್ಲಿ ಜಿಯೋಲ್ ಸಂಶೋಧನೆ ಮಾಡುತ್ತಿದ್ದರು. ಈ ವಿದ್ಯಾರ್ಥಿಯು ಕೊರೊನಾ ಸಮಯದಲ್ಲಿಯೂ ಒಬ್ಬನೇ ಹಾಸ್ಟೆಲ್‌ನಲ್ಲಿ ವಾಸವಿದ್ದರು. ಕಳೆದ ವರ್ಷವೇ ವಿಸಾ‌ ಅವಧಿ ಮುಗಿದಿತ್ತು ಎಂದು ತಿಳಿದುಬಂದಿದೆ.

ಉಗಾಂಡಾ ಮೂಲದ ಕವಿವಿ ಸಂಶೋಧನಾ ವಿದ್ಯಾರ್ಥಿ ನಾಪತ್ತೆ
Last Updated : Oct 27, 2022, 6:35 PM IST

ABOUT THE AUTHOR

...view details