ಕರ್ನಾಟಕ

karnataka

ETV Bharat / state

ಪ್ರೇಮಕತೆಯೊಂದಿಗೆ ಗಡಿ ಭಾಗದ ಸಮಸ್ಯೆ ಹೇಳು ಬರುತ್ತಿದೆ 'ಗಡಿನಾಡು' - Gadinadu film news

ಉತ್ತರ ಕರ್ನಾಟಕದ ಬೆಳಗಾವಿಯ ಗಡಿ ಭಾಗದ ಸಮಸ್ಯೆಯ ಜೊತೆಗೆ ಪ್ರೇಮ ಕಥೆಯೊಂದನ್ನು ಹೇಳುಲು 'ಗಡಿನಾಡು' ಸಿನಿಮಾ ಜ.24 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಿರ್ಮಾಪಕ ವಸಂತಮುರಾರಿ ದಳವಾಯಿ ಹೇಳಿದರು.

january 24 released Gadinadu film
ನಿರ್ಮಾಪಕ ವಸಂತಮುರಾರಿ ದಳವಾಯಿ ಸುದ್ದಿಗೋಷ್ಠಿ

By

Published : Jan 13, 2020, 6:13 PM IST

ಹುಬ್ಬಳ್ಳಿ: ಉತ್ತರ ಕರ್ನಾಟಕದ ಬೆಳಗಾವಿಯ ಗಡಿ ಭಾಗದ ಸಮಸ್ಯೆಯ ಜೊತೆಗೆ ಪ್ರೇಮ ಕಥೆಯೊಂದನ್ನು ಹೇಳುಲು 'ಗಡಿನಾಡು' ಸಿನಿಮಾ ಜ.24 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಿರ್ಮಾಪಕ ವಸಂತಮುರಾರಿ ದಳವಾಯಿ ಹೇಳಿದರು.

ನಿರ್ಮಾಪಕ ವಸಂತಮುರಾರಿ ದಳವಾಯಿ ಸುದ್ದಿಗೋಷ್ಠಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗ್ ಹುಣಸೋಡ್ ಅವರು ನಿರ್ದೇಶನ ಮಾಡಿರುವ ಸಿನಿಮಾ ಇದಾಗಿದ್ದು, ನಾಯಕ ನಟನಾಗಿ ಪ್ರಭು ಸೂರ್ಯ, ನಟಿಯಾಗಿ ಸಂಚಿತಾ ಪಡಕೋಣೆ ಅಭಿನಯ ಮಾಡಿದ್ದಾರೆ. ನಾಯಕ ವಿದ್ಯಾಭ್ಯಾಸ ಮುಗಿಸಿ ಹುಟ್ಟೂರಾದ ಬೆಳಗಾವಿಗೆ ಬರುವಾಗ ಆ ಭಾಗದ ಗಡಿ ಸಮಸ್ಯೆಯಿಂದ ಪ್ರೇರಣೆಗೊಂಡು, ಗಡಿಯ ಶಾಶ್ವತ ಪರಿಹಾರವನ್ನು ಹೇಗೆ ಕಂಡುಕೊಳ್ಳುವವನು. ಅಲ್ಲದೇ ಮರಾಠಿ ಹುಡುಗಿಯನ್ನು ಪ್ರೀತಿಸಿ, ಪ್ರೀತಿಯನ್ನು ಪಡೆಯಲು ಏನೆಲ್ಲಾ ಮಾಡುವನು ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ ಎಂದರು.

ಇನ್ನು ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಸಂಗೀತವನ್ನು ಎಲ್ವಿನ್ ಜೋಶ್ವಾ ನೀಡಿದ್ದು, ಛಾಯಾಗ್ರಹಣವನ್ನು ಗೌರಿ ವೆಂಕಟೇಶ ಮಾಡಿದ್ದಾರೆ. ಹಿರಿಯ ನಟ ಚರಣರಾಜ್, ಶೋಭ್ ರಾಜ್, ದೀಪಕ್ ಶೆಟ್ಟಿ, ರಘುರಾಜ, ಕಾಮಿಡಿ ಕಿಲಾಡಿ ಖ್ಯಾತಿಯ ರಘು ಸೀರುಂಡೆ, ಮಮತ, ಪುಷ್ಪ ಸೇರಿದಂತೆ ಮುಂತಾದವರು ನಟನೆ ಮಾಡಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಟ ಪ್ರಭು ಸೂರ್ಯ, ನಟಿ ಸಂಚಿತಾ ಪಡಕೋಣೆ ಸೇರಿದಂತೆ ಮುಂತಾದವರು ಇದ್ದರು.

ABOUT THE AUTHOR

...view details