ಕರ್ನಾಟಕ

karnataka

ETV Bharat / state

ಮನವೊಲಿಕೆ ಕಥೆ ಮುಗಿದು ಹೋಗಿದೆ: ಇವತ್ತೇ ಅಂತಿಮ ತೀರ್ಮಾನ - ಶೆಟ್ಟರ್​ - ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಧರ್ಮೇಂದ್ರ ಪ್ರಧಾನ್ ಮತ್ತು ಪ್ರಹ್ಲಾದ್​ ಜೋಶಿ ಜೊತೆ ಮಾತುಕತೆ ನಡೆಸಿದ ಬಳಿಕ ನನ್ನ ತೀರ್ಮಾನ ಪ್ರಕಟಿಸುತ್ತೇನೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.

Etv Bharatjagdish-shetter-reaction-on-ticket-issue
ಮನವೊಲಿಕೆ ಕಥೆ ಮುಗಿದು ಹೋಗಿದೆ: ಇಂದು ರಾತ್ರಿ ಮಾತುಕತೆ ನಂತರ ಅಂತಿಮ ತೀರ್ಮಾನ - ಶೆಟ್ಟರ್​

By

Published : Apr 15, 2023, 7:45 PM IST

Updated : Apr 15, 2023, 10:04 PM IST

ಮನವೊಲಿಕೆ ಕಥೆ ಮುಗಿದು ಹೋಗಿದೆ: ಇವತ್ತೇ ಅಂತಿಮ ತೀರ್ಮಾನ- ಶೆಟ್ಟರ್​

ಹುಬ್ಬಳ್ಳಿ:ರಾಜ್ಯದ ಮೂರು ಪಕ್ಷಗಳಲ್ಲಿ ಅದರಲ್ಲೂ ಭಾರತೀಯ ಜನತಾ ಪಕ್ಷ(ಬಿಜೆಪಿ) ಮತ್ತು ಕಾಗ್ರೆಸ್​ನಲ್ಲಿಟಿಕೆಟ್​ ಪಡೆಯಲು ಆಕಾಂಕ್ಷಿಗಳು ಹೆಚ್ಚಿದ್ದು, ಸ್ಪರ್ಧೆಗೆ ಆಯಾ ಪಕ್ಷಗಳಲ್ಲೇ ಪೈಪೋಟಿ ಕಂಡುಬರುತ್ತಿದೆ. ಟಿಕೆಟ್​ ಕೈ ತಪ್ಪಿದ್ದಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್​ನಲ್ಲಿ ಕೆಲವರು ಬಂಡಾಯದ ಬಾವುಟ ಹಾರಿಸಿದ್ದಾರೆ. ಅಥಣಿ ಕ್ಷೇತ್ರದಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಡಿಸಿಎಂ ಲಕ್ಷ್ಮಣ್​ ಸವದಿ ಅವರು ತಮಗೆ ಟಿಕೆಟ್​ ತಪ್ಪಿದ ಹಿನ್ನೆಲೆ ಕಾಂಗ್ರೆಸ್​ ಸೇರ್ಪಡೆಯಾಗಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದಾರೆ. ಈ ಮಧ್ಯೆ ಜಗದೀಶ್​ ಶೆಟ್ಟರ್​ ಪ್ರತಿನಿಧಿಸುವ ಹುಬ್ಬಳ್ಳಿ ಧಾರವಾಡ ಸೆಂಟ್ರಲ್​ ಕ್ಷೇತ್ರಕ್ಕೆ ಬಿಜೆಪಿ ಈವರೆಗೆ ಅಭ್ಯರ್ಥಿಯನ್ನು ಘೋಷಿಸಿಲ್ಲ. ಇದು ಮಾಜಿ ಸಿಎಂ ಶೆಟ್ಟರ್​ ಅವರನ್ನು ಕೆರಳಿಸಿದೆ.

ಮಾತುಕತೆ ಬಳಿಕ ತೀರ್ಮಾನ ತಿಳಿಸುವೆ.. ಟಿಕೆಟ್​ ಹಂಚಿಕೆ ವಿಚಾರದಲ್ಲಿಮನವೊಲಿಕೆ ಕಥೆ ಮುಗಿದು ಹೋಗಿದೆ. ಅನ್ ಕಡೀಷನಲ್​ ಅವರು ಒಪ್ಪಿಕೊಳ್ಳಬೇಕು. ಇಂದು ರಾತ್ರಿ ಮತ್ತೊಮ್ಮೆ ಚರ್ಚೆ ನಡೆಯಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಪ್ರಹ್ಲಾದ್​ ಜೋಶಿ ಸಹ ಬರುತ್ತಾರೆ. ಅವರೊಂದಿಗೆ ಮಾತುಕತೆ ನಡೆಸಿದ ನಂತರ ನನ್ನ ತೀರ್ಮಾನ ಏನು ಎಂದು ಪ್ರಕಟಿಸುತ್ತೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಸಂಜೆಯ ಗಡುವು ಮುಗಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಕೊನೆಯ ನಿರ್ಧಾರಕ್ಕೆ ಬಂದಿದ್ದೇ. ಆದರೆ ಧರ್ಮೇಂದ್ರ ಪ್ರಧಾನ ಅವರು ನಮ್ಮ ಭೇಟಿಗೂ ಮುನ್ನ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಬೇಡ ಎಂದಿದ್ದಾರೆ. ಅವರು ರಾತ್ರಿ ಭೇಟಿಯ ನಂತರ ಅಂತಿಮ ನಿರ್ಧಾರ ತಿಳಿಸುತ್ತೇನೆ ಎಂದರು.

ನನ್ನ ಕುಟುಂಬದಲ್ಲಿ ಬೇರೆ ಯಾರೂ ಸ್ಪರ್ಧಿಸುವುದಿಲ್ಲ.. ನಾನು ಮೊದಲಿನಿಂದಲೂ ಸ್ಪಷ್ಟವಾಗಿಯೇ ಹೇಳಿದ್ದೇನೆ. ಯಾವುದೇ ಪರಿಸ್ಥಿತಿಯಲ್ಲಿಯೂ ನನ್ನನ್ನು ಬಿಟ್ಟು ನಮ್ಮ ಕುಟುಂಬದವರು ಯಾರೂ ಕೂಡ ಸ್ಪರ್ಧಿಸುವುದಿಲ್ಲ. ಸ್ಪರ್ಧೆ ಮಾಡುವುದು ನಾನು ಮಾತ್ರ ಎಂದು ಅವರು ಸ್ಪಷ್ಟಪಡಿಸಿದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿಗೆ ಮೊನ್ನೆಯಿಂದಲೇ ಸಮಯ ಕೇಳಿದ್ದೆ. ಆದರೆ ಈಗ ಹೈಕಮಾಂಡ್ ವೇಟ್ ಮಾಡಲು ಹೇಳಿರುವ ಕಾರಣ ನಾನು ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಅಲ್ಲದೇ ಪ್ರತಿ ಬಾರಿ ಗಡುವು ನೀಡುತ್ತಿರುವುದು ನನಗೆ ಮುಜುಗರವನ್ನುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್​ನ ಯಾವ ನಾಯಕರೂ ನನ್ನನ್ನು ಸಂಪರ್ಕಿಸಿಲ್ಲ.. ಈಗಾಗಲೇ ನಾನು ಹೈಕಮಾಂಡ್​ಗೆ ಪ್ರಶ್ನಿಸಿದ್ದೇನೆ. ನನಗೆ ಟಿಕೆಟ್ ಕೊಡದೇ ಇರಲು ಕಾರಣ ಏನು ಎಂಬುವುದನ್ನು ಸ್ಪಷ್ಟ ಪಡಿಸಬೇಕು. ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರೂ‌‌ ನನ್ನನ್ನು ಸಂಪರ್ಕಿಸಿಲ್ಲ. ನಾನು ಯಾರ ಸಂಪರ್ಕದಲ್ಲಿಯೂ ಕೂಡ ಇಲ್ಲ ಎಂದು ಅವರು ಹೇಳಿದರು. ನನ್ನನ್ನು ಬೆಂಬಲಿಸಿ ರಾಜೀನಾಮೆ ಕೊಟ್ಟವರಿಗೆ ಬೆದರಿಸಲಾಗಿದೆ. ರಾಜಕಾರಣ ಎಲ್ಲರೂ ಮಾಡುತ್ತಾರೆ. ಮಾನಸಿಕವಾಗಿ ನಮ್ಮ ಜೊತೆ ಇದ್ದೋರಿಗೆ ಏನೂ‌ ಮಾಡೋಕೆ ಆಗಲ್ಲ ಎಂದರು.

ಇದನ್ನೂ ಓದಿ:ಬಾಗಲಕೋಟೆ: ರಾಜಕೀಯ ಗುರುಗಳನ್ನು ನೆನದು ಕಣ್ಣೀರಿಟ್ಟ ಸಚಿವ ಗೋವಿಂದ ಕಾರಜೋಳ

Last Updated : Apr 15, 2023, 10:04 PM IST

ABOUT THE AUTHOR

...view details