ಕರ್ನಾಟಕ

karnataka

ETV Bharat / state

ರಾಹುಲ್ ಗಾಂಧಿ ಒಬ್ಬ ಅಪ್ರಬುದ್ದ ನಾಯಕ: ಜಗದೀಶ್​ ಶೆಟ್ಟರ್ - ಜಗದೀಶ್​ ಶೆಟ್ಟರ್ ಲೇಟೆಸ್ಟ್​ ಸುದ್ದಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಹಿಂದೆ ಮುಂದೆ ಏನನ್ನೂ ವಿಚಾರ ಮಾಡದೆ ಬೇಕಾಬಿಟ್ಟಿಯಾಗಿ ಮಾತನಾಡುವ ಒಬ್ಬ ನಾಯಕ. ಅವರಿಗೆ ಯಾವುದೇ ಅಂತರಾಳದ ಅರಿವಿಲ್ಲ. ಮನಬಂದಂತೆ ಮಾತನಾಡುವ ಮೂಲಕ ತಮ್ಮ ಬುದ್ಧಿಹೀನತೆಯನ್ನು ತಾವೇ ತೋರಿಸುತ್ತಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Jagadish Shettar
ಜಗದೀಶ್​ ಶೆಟ್ಟರ್

By

Published : Dec 14, 2019, 4:48 PM IST

ಹುಬ್ಬಳ್ಳಿ:ದೇಶದಲ್ಲಿ ಯಾರಾದರೂ ಬುದ್ದಿ ಇಲ್ಲದ ಹಾಗೂ ಅಪ್ರಬುದ್ದ ನಾಯಕರಿದ್ದರೆ ಅದು ರಾಹುಲ್‌ ಗಾಂಧಿಯವರು ಎಂದು ಸಚಿವ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಜಗದೀಶ್​ ಶೆಟ್ಟರ್​

ನಗರದ ರೋಟರಿ ಆಫ್ ಕ್ಲಬ್​ ಮಿಡ್ ಟೌನ್ ವತಿಯಿಂದ ನಿರ್ಮಿಸಲಾದ ನೂತನ ಶೌಚಾಲಯಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ಹಿಂದೆ ಮುಂದೆ ಏನನ್ನು ವಿಚಾರ ಮಾಡದೇ ಬೇಕಾ ಬಿಟ್ಟಿಯಾಗಿ ಮಾತನಾಡುವ ಒಬ್ಬ ನಾಯಕ ಅವರಿಗೆ ಯಾವುದೇ ಅಂತರಾಳದ ಅರಿವಿಲ್ಲದೆ ಮನಬಂದಂತೆ ಮಾತನಾಡುವ ಮೂಲಕ ತಮ್ಮ ಬುದ್ಧಿ ಹೀನತೆಯನ್ನು ತಾವೇ ತೋರಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ರೀರಾಮುಲು ಸಚಿವ ಸಂಪುಟಕ್ಕೆ ಗೈರಾದ ಹಿನ್ನೆಲೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಶ್ರೀರಾಮುಲು‌ ಅವರಲ್ಲಿ ಯಾವುದೇ ಅಸಮಾಧಾನ ಇಲ್ಲ. ವೈಯುಕ್ತಿಕ ಕಾರಣಗಳಿಂದಾಗಿ ಅವರು ಸಚಿವ ಸಂಪುಟ ಸಭೆಗೆ ಹಾಜರಾಗಿರಲಿಲ್ಲ ಎಂದು ಶೆಟ್ಟರ್​ ಹೇಳಿದರು. ರಾಜ್ಯ ಬಿಜೆಪಿ ಸರ್ಕಾರ ಮುಂದಿನ ಮೂರೂವರೆ ವರ್ಷಗಳವರೆಗೆ ಸುಭದ್ರವಾಗಿ ಸರ್ಕಾರ ನಡೆಸುತ್ತೆ. ಡಿಸಿಎಂ ಸ್ಥಾನದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಸೋತ ಅನರ್ಹ ಶಾಸಕರಿಗೆ ಸ್ಥಾನ ನೀಡುವುದು, ಬಿಡುವುದು ಪಕ್ಷದ ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದರು.

ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಕೈಗಾರಿಕಾ ಬಂಡವಾಳ ಹೂಡಿಕೆದಾರರ ಸಭೆ ನಡೆಸಲಾಗುವುದು. ಇದಕ್ಕೂ ಮೊದಲು ಹುಬ್ಬಳ್ಳಿಯಲ್ಲಿ ಡಿ.16 ರಂದು ಪೂರ್ವ ಭಾವಿ ಸಭೆ ನಡೆಸಲಾಗುವುದು. ಡಿ. 23ರಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ಮುಂಬಯಿಗೆ ತೆರಳಿ ಕೈಗಾರಿಕೋದ್ಯಮಿಗಳನ್ನು ಆಹ್ವಾನಿಸಲಾಗುವುದು. ಎರಡನೇ ಸ್ತರದ ನಗರಗಳಲ್ಲಿ ಕೈಗಾರಿಕೆಗಳ ಪ್ರಾರಂಭಕ್ಕೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.

ABOUT THE AUTHOR

...view details