ಕರ್ನಾಟಕ

karnataka

By

Published : Nov 26, 2020, 1:38 PM IST

Updated : Nov 26, 2020, 2:27 PM IST

ETV Bharat / state

ಇರಾನಿ ಗ್ಯಾಂಗ್ ಹಿಡಿಯಲು ಬಂದ ಪೊಲೀಸರ ಮೇಲೆ ಧಾರವಾಡದಲ್ಲಿ ಹಲ್ಲೆ

ನಗರದ ಸಂಗಮ್ ವೃತ್ತದ ಬಳಿ ಕಳ್ಳತನ ಪ್ರಕರಣ ಹಿನ್ನೆಲೆ ಕಳ್ಳರನ್ನು ಹಿಡಿಯಲು ಬಂದ ಪೊಲೀಸರ ಮೇಲೆ ಇರಾನಿ ಗ್ಯಾಂಗ್ ಹಲ್ಲೆ ಮಾಡಿದೆ.

Iranian gang attacked on Andhra police in Darwada
ಇರಾನಿ ಗ್ಯಾಂಗ್ ಹಿಡಿಯಲು ಬಂದ ಆಂದ್ರ ಪೊಲೀಸರ ಮೇಲೆ ಹಲ್ಲೆ

ಧಾರವಾಡ: ಕಳ್ಳತನ ಪ್ರಕರಣ ಹಿನ್ನೆಲೆ ಕಳ್ಳರನ್ನು ಹಿಡಿಯಲು ಬಂದ ಪೊಲೀಸರು ಮತ್ತು ಕಳ್ಳರ ನಡುವೆ ಮಾರಾಮಾರಿ ಸಂಭವಿಸಿದೆ.

ಇರಾನಿ ಗ್ಯಾಂಗ್ ಹಿಡಿಯಲು ಬಂದ ಪೊಲೀಸರ ಮೇಲೆ ಹಲ್ಲೆ

ನಗರದ ಸಂಗಮ್ ವೃತ್ತದ ಬಳಿ ಘಟನೆ ನಡೆದಿದ್ದು, ಆಂಜನೇಯ ದೇವಸ್ಥಾನದ ಎದುರು ಇರಾನಿ ಗ್ಯಾಂಗ್ ಕಳ್ಳರು ಪೊಲೀಸರ ಮೇಲೆ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ‌ ಮಾಡಿದ್ದಾರೆ.

ಇರಾನಿ ಗ್ಯಾಂಗ್ ಹಲ್ಲೆ ಮಾಡಿದ್ದಲ್ಲದೇ ತಮಗೆ ತಾವೇ ಬಿಯರ್ ಬಾಟಲಿಯಿಂದ ಇರಿದುಕೊಂಡ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಾಳು ಪೊಲೀಸರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಳಕ್ಕೆ ಧಾರವಾಡ ಎಸಿಪಿ ಅನುಷಾ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಧಾರವಾಡ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ‌ ಘಟನೆ ಸಂಭವಿಸಿದೆ.

ಓದಿ:5ರ ಬಾಲಕಿ ಅಪಹರಿಸಿ ಅತ್ಯಾಚಾರ ಎಸಗಿದ ಅಪರಿಚಿತ!

Last Updated : Nov 26, 2020, 2:27 PM IST

For All Latest Updates

ABOUT THE AUTHOR

...view details