ಕರ್ನಾಟಕ

karnataka

ಗೋವು ರಕ್ಷಕರ ಹೆಸರಲ್ಲಿ ವಾಹನ ಜಖಂಗೊಳಿಸಿದ ಕಿಡಿಗೇಡಿಗಳು..

By

Published : Nov 22, 2019, 4:39 PM IST

ಧಾರವಾಡ ತಾಲೂಕಿನ ಸೋಮಾಪೂರ ಗ್ರಾಮದ ಬಳಿ ಗೋವು ಸಾಗಿದುತ್ತಿದ್ದ ಟಾಟಾ ಏಸ್​ ವಾಹನವನ್ನು ಪುಡಾರಿಗಳು ಜಖಂಗೊಳಿಸಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಕ್ರಮ ಗೋವು ಸಾಗಾಟ ಆರೋಪಿಸಿ ವಾಹನ ಜಖಂ

ಧಾರವಾಡ:ಅಕ್ರಮ ಗೋವು ಸಾಗಾಟ ಆರೋಪದ ಮೇಲೆ ಟಾಟಾ ಏಸ್ ವಾಹನದ ಗಾಜು ಒಡೆದು ಬೆಂಕಿ ಹಚ್ಚಲು ಯತ್ನಿಸಿದ ಘಟನೆ ತಾಲೂಕಿನ ಸೋಮಾಪೂರ ಗ್ರಾಮದ ಬಳಿ ನಡೆದಿದೆ.

ಟಾಟಾ ಏಸ್​ ವಾಹನದಲ್ಲಿ ಎರಡು ಆಕಳುಗಳನ್ನ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂದು ಗೋ ರಕ್ಷಕರ ಹೆಸರಲ್ಲಿ ವಾಹನವನ್ನು ಜಖಂಗೊಳಿಸಿದ್ದಾರೆ. ಗೋವುಗಳನ್ನು ಕೆಳಗಿಳಿಸಿ ವಾಹನ ಸುಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಅಕ್ರಮ ಗೋವು ಸಾಗಾಟ ಆರೋಪಿಸಿ ವಾಹನ ಜಖಂ..

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ವಾಹನದಲ್ಲಿ ಸಾಗಿಸುತ್ತಿದ್ದ ಹಸುಗಳು ದೇವರಿಗೆ ಬಿಟ್ಟವು ಎನ್ನಲಾಗುತ್ತಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ABOUT THE AUTHOR

...view details