ಕರ್ನಾಟಕ

karnataka

By

Published : Feb 5, 2023, 3:46 PM IST

ETV Bharat / state

ಒಡೆದು ಹೋಳಾದಂತಹ ಜೆಡಿಎಸ್ ಕೂಡಿಸೋ ಪ್ರಯತ್ನ ‌ಮಾಡ್ತೀದಿನಿ : ಸಿ ಎಂ ಇಬ್ರಾಹಿಂ

ಶೀಘ್ರದಲ್ಲೇ ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ -ಒಡೆದು ಹೋಳಾಗಿರುವ ಜೆಡಿಎಸ್ ಕೂಡಿಸುವ ಪ್ರಯತ್ನ - ಪಕ್ಷದ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ

ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ
ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ

ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ

ಹುಬ್ಬಳ್ಳಿ:ಕಲ್ಯಾಣ ಕರ್ನಾಟಕ ಮತ್ತು ಮುಂಬೈ ಕರ್ನಾಟಕದಲ್ಲಿ ನಾನು ಹೆಚ್ಚು ಓಡಾಡ್ತೀದಿನಿ. ಒಡೆದು ಹೋಳಾದಂತಹ ಜೆಡಿಎಸ್ ಕೂಡಿಸೋ ಪ್ರಯತ್ನ ‌ಮಾಡ್ತೀದಿನಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಹೇಳಿದರು. ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಇವತ್ತು ಬೇರೆ ಬೇರೆ ಪಕ್ಷದಿಂದ ಸಜ್ಜನರು ನಮ್ಮ ಪಕ್ಷ ಸೇರುತ್ತಿದ್ದಾರೆ.‌ ಬಿಜೆಪಿಯಲ್ಲಿರುವ ಎ ಮಂಜು ಜೆಡಿಎಸ್ ಸೇರಿದ್ದಾರೆ. ಅವರೇ ಅಭ್ಯರ್ಥಿ. ಮೊದಲ ಪಟ್ಟಿಯಲ್ಲಿ ಕೆಲ ಬದಲಾವಣೆ ಆಗುತ್ತೆ. ಶೀಘ್ರದಲ್ಲೇ ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುವುದು. ಹಳ್ಳಿ ಹಳ್ಳಿಗೂ ಹೆಚ್​ ಡಿ ಕುಮಾರಸ್ವಾಮಿ ತಲುಪಿದ್ದಾರೆ. ನಾವು ತಂದ ಜನಕ್ಕೆ ಭಾಷಣ ಮಾಡ್ತಿಲ್ಲ, ಬಂದ ಜನಕ್ಕೆ ಭಾಷಣ ಮಾಡ್ತೀದಿವಿ. ಬೆಳಗಾವಿಯಲ್ಲೂ ಅನೇಕ ಜನ ಸೇರ್ಪಡೆ ಆಗ್ತಾರೆ‌. ನಮಗೆ ಹಿಂದೆ ಅಭ್ಯರ್ಥಿ ಇಲ್ಲ ಅಂದ್ರು, ಶೆಟ್ಟರ್ ಅವರು ಸ್ಪರ್ಧೆ ಮಾಡೋ ಕ್ಷೇತ್ರದಲ್ಲಿ ಆರು ಜನ ಟಿಕೆಟ್ ಕೇಳ್ತಿದಾರೆ ಎಂದು ಇಬ್ರಾಹಿಂ ತಿರುಗೇಟು ನೀಡಿದರು.

ಮಂಚದ ಮೇಲೆ ಬಿಜೆಪಿ ಸರ್ಕಾರ ತರಲಾಗಿದೆ..13 ಜನರನ್ನು ಮಂಚದ ಮೇಲೆ ಮಲಗಿಸಿ ಸರ್ಕಾರ ತರಲಾಗಿದೆ ಎಂದು ಬಿಜೆಪಿ ವಿರುದ್ಧ ಸಿಎಂ ಇಬ್ರಾಹಿಂ ವಾಗ್ದಾಳಿ ನಡೆಸಿದರು. 13 ಜನರಲ್ಲಿ 12 ಜನ ಮಂತ್ರಿ ಆಗಿದಾರೆ. ಇವತ್ತು ಜಾರಕಿಹೊಳಿ ಸಿಡಿ ತಗೊಂಡು ಕೇಂದ್ರದ ಹೋಮ್ ಮಿನಿಸ್ಟರ್ ಹತ್ರ ಹೋಗಿದ್ದಾರೆ. ಕಟೀಲ್​ ಪಿಟಿಲು ಬಾರಿಸಿ ಹೇಳ್ತಾನೆ. ರೋಡ್ ಬೇಡ, ಲವ್ ಜಿಹಾದ್ ಬಗ್ಗೆ ಮಾತಾಡ್ತಾನೆ. 12 ಜನರ ಸಿಡಿನೇ ಲವ್ ಜಿಹಾದ್ ನಾ ಎಂದು ಏಕವಚನದಲ್ಲೇ ಪ್ರಶ್ನಿಸಿದರು.

ಇವತ್ತು ಜಾರಕಿಹೊಳಿ ವಿಷಕನ್ಯೆ ಬಗ್ಗೆ ಮಾತಾಡ್ತಾರೆ. ಏನ್​ ಇದೆಲ್ಲ. ಬೊಮ್ಮಾಯಿ ಇಂತಹ ಪಾಪಿಗಳನ್ನು ಕಟ್ಕೊಂಡು ಮುಖ್ಯಮಂತ್ರಿ ಆಗಿದ್ದಾರೆ. ಸದಾನಂದಗೌಡ ಸೇರಿ 12 ಜನರ ಕ್ಯಾಸೆಟ್ ಹೊರಗೆ ಹಾಕಬೇಕು. ಇಲ್ಲದಿದ್ದರೆ ನೀವು ರಾಜೀನಾಮೆ ಕೊಟ್ಟು ಹೊರಗೆ ಬರಬೇಕು. ಸ್ಯಾಂಟ್ರೋ ರವಿ ಎಲ್ಲಿದ್ದಾನೆ. ಅವನ ಬಗ್ಗೆ ಸುದ್ದಿನೇ ಇಲ್ಲ. ಮಂಚ ಮುರಿಯೋದೆ ಅಚ್ಛೇ ದಿನನಾ. ಇದಕ್ಕೆ ಪ್ರಧಾನಿ ಮೋದಿ ಉತ್ತರ ಕೊಡಬೇಕು. 13 ಜನ ಬಂದು ರಾಜೀನಾಮೆ ಕೊಟ್ಟವರು ದರಿದ್ರರು. ಯಡಿಯೂರಪ್ಪ, ನಿನ್ನ ಮಗ ಮೂರು ಸಲ ಎಂಪಿ ಆಗಿದ್ದಾನೆ. ಏನಾಯ್ತು, 30 ಸಾವಿರ ಜನರಿಗೆ ಮಣ್ಣು ಹಾಕಿದ್ದೀರಿ. ಈಶ್ವರಪ್ಪಗೆ ಕ್ಲೀನ್ ಚಿಟ್ ಕೊಡಿಸಿದ್ದೀರಿ. ಅದು ಸಿಬಿಐ ತನಿಖೆಯಾಗಬೇಕು. ಬಿಜೆಪಿಯಲ್ಲಿ ದರಿದ್ರ ಗ್ರಹಗಳು ಸೇರಿಕೊಂಡಿವೆ. ನಿಮ್ಮನ್ನು ತೆಗೆದು ಹಾಕಬೇಕು ಎಂದರು.

ಜೋಶಿ ಅವರೇ ಇದೇನಾ ನವಗ್ರಹ ಪೂಜೆ. ಬನ್ನಿ ಸಂವಾದ ಮಾಡೋಣಾ. ಈದ್ಗಾ ಮೈದಾನದಲ್ಲಿ ಗಣಪತಿ ಪೂಜೆ ಕೂರಿಸಿದ್ರೆ ಅಲ್ಲ. ಜನರ ಮನಸ್ಸಲ್ಲಿ ಗಣಪತಿ ಕೂರಿಸಿ. ದರ್ಗಾ ತೆರವು ಮಾಡಿದ್ರೆ, ಏನ್ ಮಾಡಿತ್ತು ನಿಮಗೆ. ಬೈರಿದೇವರಕೊಪ್ಪ ದರ್ಗಾ ತೆರವು ಮಾಡಿದೀರಿ, ಏನ್ ಸಿಕ್ತು ನಿಮಗೆ. ಬೆಲ್ಲದ್​ ಜಾಗ ಇದೆ. ಹಾಗಾಗಿ ತೆರವು ಮಾಡಿದ್ರಿ. ನಾನು ಬೊಮ್ಮಾಯಿ ಅವರಿಗೆ ಧನ್ಯವಾದ ಹೇಳ್ತೀನಿ. ಅವರು ಅಲ್ಲಿ ಹೋಗಿ ಕ್ಷಮೆ ಕೇಳಿದ್ರು.
ನಿರ್ಮಲಾ ಸೀತರಾಮನ್ ಕರ್ನಾಟಕಕ್ಕೆ ಬಂದ್ರೆ ನಕ್ಕಿದ್ದೇ ನೋಡಿಲ್ಲ. 26 ಜನ ಸಂಸದರು ಭೂಮಿಗೆ ಬಾರ ಕೂಳಿಗೆ ದಂಡ. ಬಿಜೆಪಿ ಕರ್ನಾಟಕದಲ್ಲಿ ಮೂರನೇ ಸ್ಥಾನದಲ್ಲಿದೆ. ಅದರ ನೆಕ್ಸ್ಟ್ ಕಾಂಗ್ರೆಸ್. ಕಾಂಗ್ರೆಸ್​ಗೂ ಸಾಬರ್​ಗೆ ಟೋಪಿ ಹಾಕಿದ್ದಾರೆ ಎಂದು ಸಿಎಂ ಇಬ್ರಾಹಿಂ ಟೀಕಿಸಿದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಡುಪ್ಲಿಕೇಟ್ ಶೆಟ್ಟಿ. ಜೋಶಿ, ಶೆಟ್ಟರ್ ಎಷ್ಟು ಎಕರೆ ಜಮೀನು ಮಾಡಿದ್ದಾರೆ. ನಮ್ಮ ಸರ್ಕಾರ ಬರಲಿ, ಎಲ್ಲ ಇವರದು ಹೊರಗೆ ಬರುತ್ತೆ‌. ನಾನು ಕಾಂಗ್ರೆಸ್​ನಲ್ಲಿದ್ರು, ದೇವೇಗೌಡರ ವಿರುದ್ಧ ನಾನು ಮತ ಕೇಳಿಲ್ಲ. ಸಿದ್ದರಾಮಯ್ಯ ನಿನಗೆ ಎರಡು ಸಲ ರಾಜಕೀಯ ಜನ್ಮ ಕೊಟ್ಟೆ. ಜಮೀರ್​ ಅವರನ್ನ ಕರೆದುಕೊಂಡು ಹೋಗಿ ಹಾಲಲ್ಲಿ ವಿಷ ಹಾಕ್ತಿದ್ದಾರೆ. ಹುಮನಾಬಾದ್ ಅಲ್ಲಿ ನನ್ನ ಮಗನಿಗೂ ಬಿಜೆಪಿಗೂ ಫೈಟ್ ಇದೆ. ಅಲ್ಲಿ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ. ಇಂಟಲಿಜೆನ್ಸ್ ರಿಪೋರ್ಟ್ ಇದೆ. ಬೊಮ್ಮಾಯಿಗೂ ಗೊತ್ತಾಗಿದೆ. ಜಮೀರ್ ಇಲ್ಲೂ ನನ್ನ‌ ಮಗ ಗೆಲ್ತಾನೆ. ಜನತಾದಳ ಅಧಿಕಾರಕ್ಕೆ ಬರೋದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಯಡಿಯೂರಪ್ಪ ಒಂದೇ: ಇವತ್ತು ವರುಣಾದಲ್ಲಿ ಯಡಿಯೂರಪ್ಪ ಇಲ್ಲದೆ ಸಿದ್ದರಾಮಯ್ಯ ಗೆಲ್ಲೋಕೆ ಆಗಲ್ಲ. ಹಾಗಾಗಿ ಯಡಿಯೂರಪ್ಪ ಅವರೇ ಸಿದ್ದರಾಮಯ್ಯ ಕೋಲಾರದಲ್ಲಿ ನಿಲ್ಲಲ್ಲ ಎಂದಿದ್ದಾರೆ. ನಾನೂ ಕೂಡ ಕೋಲಾರ ಬೇಡ ಎಂದಿದ್ದೇನೆ. ಸಿದ್ದರಾಮಯ್ಯ ಯಡಿಯೂರಪ್ಪ ಒಂದೇ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷರು ಹೊಸ ಬಾಂಬ್ ಸಿಡಿಸಿದರು.

ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡುವ ವಿಚಾರವಾಗಿ ಪಕ್ಷ ತೀರ್ಮಾನ ಮಾಡುತ್ತದೆ. ಸಂಸದ ಡಿ ಕೆ ಸುರೇಶ್ ಹೇಳಿಕೆಗೆ ಸಿಎಂ ಇಬ್ರಾಹಿಂ ಪ್ರತಿಕ್ರಿಯಿಸಿ, ಬಿಜೆಪಿ ಒಂದು ದೊಡ್ಡ ಪಕ್ಷ. ನಮ್ಮ ಅವರ ನಡುವೆ ಭಿನ್ನಾಭಿಪ್ರಾಯ ಇದೆ. ವಾಜಪೇಯಿ ಅವರಂತಹ ಮಾಹಾನುಭವರಿದ್ದ ಪಕ್ಷ. ನಾನು ಕೊಲೆ ಮಾಡ್ತಾರೆ ಅನ್ನೋ ಶಬ್ದ ಬಳಸಲ್ಲ ಎಂದು ಪರೋಕ್ಷವಾಗಿ ಡಿ ಕೆ ಸುರೇಶ್​ಗೆ ಟಾಂಗ್ ಕೊಟ್ಟರು.

ಓದಿ :'ಬಿಜೆಪಿಯವರು ಯಡಿಯೂರಪ್ಪರನ್ನೇ ಪಂಕ್ಚರ್ ಮಾಡಿದ್ದಾರೆ'

ABOUT THE AUTHOR

...view details