ಕರ್ನಾಟಕ

karnataka

ETV Bharat / state

ಹೈದ್ರಾಬಾದ್ ಎನ್​ಕೌಂಟರ್ ಸ್ವಾಗತಾರ್ಹ ಎಂದ ಪ್ರಮೋದ್ ಮುತಾಲಿಕ್ - The Hyderabad rapists

ಹೈದ್ರಾಬಾದ್ ಅತ್ಯಾಚಾರಿಗಳನ್ನು ಎನ್​ಕೌಂಟರ್ ಮಾಡಿದ್ದು, ಇದರಿಂದ ನನಗೆ ತುಂಬಾ ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ.

dwdದಡದ
ಪ್ರಮೋದ್ ಮುತಾಲಿಕ್

By

Published : Dec 6, 2019, 7:07 PM IST

ಧಾರವಾಡ: ಹೈದ್ರಾಬಾದ್​ನಲ್ಲಿ ಆತ್ಮರಕ್ಷಣೆಗಾಗಿ ಅತ್ಯಾಚಾರಿಗಳನ್ನು ಎನ್​ಕೌಂಟರ್​ ಮಾಡಿರುವ ಪೊಲೀಸರ ಕ್ರಮವನ್ನು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸ್ವಾಗತಿಸಿದ್ದಾರೆ. ಎನ್​ಕೌಂಟರ್ ನಲ್ಲಿ ಭಾಗಿಯಾದ ಅಧಿಕಾರಿಗಳಿಗೆ ಅಭಿನಂದನಾ ವಿಡಿಯೋ‌ವನ್ನು ಅವರು ಬಿಡುಗಡೆ ಮಾಡಿದ್ದಾರೆ.

ಹೈದ್ರಾಬಾದ್ ಎನ್​ಕೌಂಟರ್ ಸ್ವಾಗತಿಸಿದ ಮುತಾಲಿಕ್​

ಧಾರವಾಡದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಹೈದರಾಬಾದ್​ನಲ್ಲಿ ನಡೆದ ಪಶುವೈದ್ಯೆ ದಿಶಾ ಅವರ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಇಂದು ಬೆಳಗ್ಗೆ ಎನ್​ಕೌಂಟರ್​ ಮಾಡಿದ್ದು, ರೇಪಿಸ್ಟ್​ಗಳಿಗೆ ತಕ್ಕ ಪಾಠವನ್ನು ಪೊಲೀಸರು ಕಲಿಸಿದ್ದಾರೆ ಎಂದು ಹೇಳಿದ್ದಾರೆ.

ಅತ್ಯಾಚಾರಿಗಳಿಗೆ ಭಯ ಹುಟ್ಟಿಸುವಂತ ಕೆಲಸವನ್ನು ಪೊಲೀಸರು ಮಾಡಿದ್ದಾರೆ. ಇದೊಂದು‌ ಉತ್ತಮ ಹೆಜ್ಜೆ.‌ ಮಾನವ ಹಕ್ಕುಗಳ ಹೆಸರಿನಲ್ಲಿ ಪೊಲೀಸರ ‌ಮೇಲೆ ಒತ್ತಡ ಹಾಕಬಾರದು ಎಂದು ಮುತಾಲಿಕ್​ ತಿಳಿಸಿದ್ದಾರೆ.

ABOUT THE AUTHOR

...view details