ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ಗಲಭೆ ಪ್ರಕರಣ : ಆರೋಪಿಗಳ ಸಂಬಂಧಿಗಳಿಗೆ ಶಾಸಕ ಜಮೀರ್‌ ಫುಡ್‌ ಕಿಟ್‌ ವಿತರಣೆ ಕಾರ್ಯಕ್ರಮಕ್ಕೆ ಬಿಜೆಪಿ ಆಕ್ಷೇಪ - ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಕಪಟಕರತ ನೇತೃತ್ವದಲ್ಲಿ ಎಸಿಪಿಯವರಿಗೆ ಮನವಿ

ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿಗಳ ಸಂಬಂಧಿಗಳಿಗೆ ಶಾಸಕ ಜಮೀರ್ ಅವರಿಂದ ಕಿಟ್ ವಿತರಣೆ ಮಾಡಲಾಗುವುದು ಎಂದು ಪ್ರಕಟಣೆ ಹೊರಡಿಸಲಾಗಿತ್ತು. ಇದು ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಈ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ..

MLA Jamir
ಶಾಸಕ ಜಮೀರ್

By

Published : Apr 29, 2022, 7:36 PM IST

ಹುಬ್ಬಳ್ಳಿ :ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾದ ಆರೋಪಿತರ ಕುಟುಂಬಗಳಿಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಫುಡ್ ಕಿಟ್ ಮತ್ತು ಧನ ಸಹಾಯ ನೀಡುವುದಾಗಿ ಪ್ರಕಟಣೆ ನೀಡಿದ್ದರು.

ಇದು ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿತ್ತು. ಹುಬ್ಬಳ್ಳಿ ಕಸಬಾಪೇಟೆಯ ಮಸ್ತಾನ್ ಶಾ ಶಾದಿ ಮಹಲ್​ನಲ್ಲಿ ಫುಡ್ ಕಿಟ್ ವಿತರಿಸಲಿದ್ದಾರೆಂಬ ಮಾಹಿತಿ ಇತ್ತು.

ಎಸಿಪಿಯವರಿಗೆ ಮನವಿ ಪತ್ರ ಸಲ್ಲಿಕೆ

ಜಮೀರ್ ಅಹ್ಮದ್ ಫುಡ್ ಕಿಟ್ ವಿತರಣೆಗೆ ಖಂಡನೆ ವ್ಯಕ್ತವಾಗಿತ್ತು. ಅಲ್ಲದೇ ಕಾಂಗ್ರೆಸ್ ನಾಯಕರು ಹಾಗೂ ಮುಖಂಡರು ಇದರಲ್ಲಿ ಭಾಗವಹಿಸಲು ನಿರಾಸ್ತಕಿ ತೋರಿದ್ದರಿಂದ ಕಾರ್ಯಕ್ರಮ ರದ್ದುಪಡಿಸಲಾಗಿದೆ.

ಗಲಭೆ ಪ್ರಕರಣದಲ್ಲಿ ಭಾಗಿಯದವರಿಗೆ ಧನ ಸಹಾಯ ಹಾಗೂ‌ ಫುಡ್ ಕಿಟ್ ವಿತರಣೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಕಪಟಕರ ನೇತೃತ್ವದಲ್ಲಿ ಎಸಿಪಿಯವರಿಗೆ ಮನವಿ ಸಲ್ಲಿಸಲಾಯಿತು.

ಮನವಿ ಪತ್ರ

ಇದನ್ನೂ ಓದಿ:ಸರ್ಕಾರದ ನಿರ್ಧಾರ ಅಭ್ಯರ್ಥಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ: ಪ್ರಿಯಾಂಕ್ ಖರ್ಗೆ

ABOUT THE AUTHOR

...view details