ಕರ್ನಾಟಕ

karnataka

By

Published : Apr 3, 2020, 12:33 PM IST

Updated : Apr 3, 2020, 1:54 PM IST

ETV Bharat / state

ಲಾಕ್​ಡೌನ್​ಗೆ ನಿಯಮಕ್ಕೆ ಹುಬ್ಬಳ್ಳಿ ಜನರ ನಿಷ್ಕಾಳಜಿ; ಬೇಕಾಬಿಟ್ಟಿ ಓಡಾಟಕ್ಕೆ ಹಾಕಬೇಕಿದೆ ಬ್ರೇಕ್

ತರಕಾರಿಗಳು ಮನೆ ಬಾಗಿಲಿಗೆ ಬರುತ್ತಿವೆ. ಕಿರಾಣಿ ‌ಅಂಗಡಿಗಳು ತೆರೆದಿವೆ. ಆದ್ರೂ ಜನರು ಮಾತ್ರ ನಗರದ ಪ್ರಮುಖ ರಸ್ತೆಯಲ್ಲಿ ಸುತ್ತುವುದನ್ನು ಮಾತ್ರ ಬಿಡುತ್ತಿಲ್ಲ. ಮನೆಯಿಂದ ಯಾರು ಹೊರಬರಬೇಡಿ ಎಂದು ಸರ್ಕಾರದ ಆದೇಶವಿದ್ದರೂ ಹುಬ್ಬಳ್ಳಿ ಮಂದಿ ಪಾಲಿಸುತ್ತಿಲ್ಲ.

ಲಾಕ್​ಡೌನ್​ಗೆ ಡೋಂಟ್​ಕೇರ್ ​ಎನ್ನುತ್ತಿದ್ದಾರೆ ಹುಬ್ಬಳ್ಳಿ ಜನ
ಲಾಕ್​ಡೌನ್​ಗೆ ಡೋಂಟ್​ಕೇರ್ ​ಎನ್ನುತ್ತಿದ್ದಾರೆ ಹುಬ್ಬಳ್ಳಿ ಜನ

ಹುಬ್ಬಳ್ಳಿ: ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ಲಾಕ್ ಡೌನ್‌ ಆದೇಶಿಸಿದೆ. ಆದ್ರೆ, ವಾಣಿಜ್ಯ ನಗರಿಯ ಜನರು ಮಾತ್ರ ಲಾಕ್​ಡೌನ್​​ಗೆ ಡೋಂಟ್ ಕೇರ್ ಎನ್ನುತ್ತಿದ್ದಾರೆ‌.

ಲಾಕ್​ಡೌನ್​ಗೆ ನಿಯಮಕ್ಕೆ ಹುಬ್ಬಳ್ಳಿ ಜನರ ನಿಷ್ಕಾಳಜಿ

ಅಂದಿ‌ನಿಂದ ಇಂದಿನವರೆಗೂ ಹುಬ್ಬಳ್ಳಿಯಲ್ಲಿ ಯಥಾಸ್ಥಿತಿ ಮುಂದುವರೆದಿದೆ. ಅವಶ್ಯ ವಸ್ತುಗಳ ಖರೀದಿ ನೆಪದಲ್ಲಿ ಜನರು ಗುಂಪು ಸೇರುವುದು, ತಮ್ಮ ಖಾಸಗಿ ವಾಹನ ಹಾಗೂ ಬೈಕ್​ಗಳಲ್ಲಿ ಬೇಕಾಬಿಟ್ಟಿಯಾಗಿ ಓಡಾಡುವುದು ಮತ್ತೆ ಮುಂದುವರೆದಿದೆ.

ತರಕಾರಿಗಳು ಮನೆ ಬಾಗಿಲಿಗೆ ಬರುತ್ತಿವೆ. ಕಿರಾಣಿ ‌ಅಂಗಡಿಗಳು ತೆರೆದಿವೆ. ಇಷ್ಟಿದ್ದರೂ ಜನರು ಮಾತ್ರ ನಗರದ ಪ್ರಮುಖ ರಸ್ತೆಗಳಲ್ಲಿ ಸುತ್ತುವುದನ್ನು ಬಿಡುತ್ತಿಲ್ಲ. ಮನೆಯಿಂದ ಯಾರೂ ಹೊರಬರಬೇಡಿ ಎಂದು ಸರ್ಕಾರದ ಆದೇಶವಿದ್ರೂ ಹುಬ್ಬಳ್ಳಿ ಮಂದಿ ಪಾಲಿಸುತ್ತಿಲ್ಲ. ಮೊದ ಮೊದಲು‌ ಪೊಲೀಸರು ವಾಹನ ಸೀಜ್ ಮಾಡಿ ಕೆಲವರಿಗೆ ಲಾಠಿ ರುಚಿ ತೋರಿಸುತ್ತಿದ್ದರು. ಪೊಲೀಸರು ಎಷ್ಟೇ ಶಿಸ್ತಿನ ಕ್ರಮ ತೆಗೆದುಕೊಂಡರೂ ಕೂಡ ಜನರು ಮಾತ್ರ ಕ್ಯಾರೆನ್ನುತ್ತಿಲ್ಲ.

Last Updated : Apr 3, 2020, 1:54 PM IST

ABOUT THE AUTHOR

...view details