ಕರ್ನಾಟಕ

karnataka

ETV Bharat / state

ಸಾಲಭಾದೆ: ಕಲಘಟಗಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ - ಹುಬ್ಬಳ್ಳಿ ರೈತ ಪುನಪ್ಪ ಲಮಾನಿ ಆತ್ಮಹತ್ಯೆ

ಸಾಲ ಮರುಪಾವತಿಸಲಾಗದೆ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಸಾಲಭಾದೆ ತಾಳಲಾರದೆ ನೇಣಿಗೆ ಶರಣಾದ ರೈತ

By

Published : Nov 17, 2019, 1:11 PM IST

Updated : Nov 17, 2019, 1:25 PM IST

ಹುಬ್ಬಳ್ಳಿ: ಸಾಲಭಾದೆ ತಾಳಲಾರದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಘಟಗಿ ತಾಲೂಕಿನ ಸಿಗಿಗಟ್ಟಿ ಗ್ರಾಮದಲ್ಲಿ ನಡೆದಿದೆ.

ಪುನಪ್ಪ ಲಮಾನಿ(54) ಆತ್ಮಹತ್ಯೆ ಮಾಡಿಕೊಂಡ ರೈತ.

ಈತ ವಿವಿಧ ಕಡೆಗಳಿಂದ ಒಂದು ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದನಂತೆ. ಆದ್ರೆ, ತೆಗೆದುಕೊಂಡ ಹಣ ಮರುಪಾವತಿಸಲಾಗದೆ ಮನನೊಂದು ಸಾವಿಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Nov 17, 2019, 1:25 PM IST

ABOUT THE AUTHOR

...view details