ಹುಬ್ಬಳ್ಳಿ: ರಕ್ಷಾ ಬಂಧನದ ನಿಮಿತ್ತ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಹುಬ್ಬಳ್ಳಿಯ ಗುತ್ತಿಗೆ ಪೌರ ಕಾರ್ಮಿಕ ಮಹಿಳೆಯರು ರಾಖಿ ಕಟ್ಟಿ ಶುಭಾಶಯ ತಿಳಿಸಿದರು.
ಸಚಿವ ಜಗದೀಶ್ ಶೆಟ್ಟರ್ಗೆ ರಾಖಿ ಕಟ್ಟಿದ ಮಹಿಳಾ ಪೌರ ಕಾರ್ಮಿಕರು - ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ನ್ಯೂಸ್
ಹುಬ್ಬಳ್ಳಿಯ ಗುತ್ತಿಗೆ ಪೌರ ಕಾರ್ಮಿಕ ಮಹಿಳೆಯರು ಸಚಿವ ಜಗದೀಶ್ ಶೆಟ್ಟರ್ಗೆ ರಾಖಿ ಕಟ್ಟಿ ರಕ್ಷಾ ಬಂಧನದ ಶುಭಾಶಯ ತಿಳಿಸಿದರು.
![ಸಚಿವ ಜಗದೀಶ್ ಶೆಟ್ಟರ್ಗೆ ರಾಖಿ ಕಟ್ಟಿದ ಮಹಿಳಾ ಪೌರ ಕಾರ್ಮಿಕರು Jagadish shettar](https://etvbharatimages.akamaized.net/etvbharat/prod-images/768-512-11:37:34:1596434854-kn-hbl-01-shettra-rakhi-kattida-pour-karamokaru-av-ka10025-03082020112207-0308f-1596433927-406.jpg)
Jagadish shettar
ಈ ವೇಳೆ ಮಾತನಾಡಿದ ಶೆಟ್ಟರ್, ರಾಖಿ ಹಬ್ಬ ಸಹೋದರ- ಸಹೋದರರಿಗೆ ವಿಶೇಷವಾಗಿದ್ದು, ಜೀವನದಲ್ಲಿ ಸಂಕಷ್ಟ ಎದುರಾದಾಗ ಸಹೋದರ ಪಾರು ಮಾಡುತ್ತಾನೆ ಎನ್ನುವುದನ್ನು ಸೂಚಿಸುತ್ತದೆ. ಈ ಹಬ್ಬ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಗುತ್ತಿಗೆ ಪೌರ ಕಾರ್ಮಿಕರಾದ ಗಂಗಮ್ಮ ಸಿದ್ರಾಮಪುರ, ಸೀತಮ್ಮ ಮುದ್ದಿನಗೇರಿ, ಹುಲಿಗೆಮ್ಮ ಚಿಕ್ಕತುಂಬಳ, ಬಸಮ್ಮ ಮದರಿ ಹಾಗೂ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪೌರ ಕಾರ್ಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ಡಾ.ವಿಜಯ ಗುಂಟ್ರಾಳ ಇದ್ದರು.
TAGGED:
ಹುಬ್ಬಳ್ಳಿ ರಕ್ಷಾ ಬಂಧನ ಆಚರಣೆ