ಹುಬ್ಬಳ್ಳಿ:ಅವಳಿ ನಗರದ ಜನರು ಹದಗೆಟ್ಟ ರಸ್ತೆಗಳ ದುರಸ್ತಿ ಮಾಡಿಸಿ ಎಂದು ಪರಿಪರಿಯಾಗಿ ಬೇಡಿಕೊಂಡರೂ ಕೂಡ ಸಂಬಂಧಿಸಿದ ಅಧಿಕಾರಿಗಳು ಜನರ ಮನವಿಗೆ ಕಿಮ್ಮತ್ತು ಬೆಲೆ ನೀಡುತ್ತಿಲ್ಲ ಎಂದು ಆರೋಪಿಸಿರುವ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ.
ಹೌದು, ಹುಬ್ಬಳ್ಳಿ-ಧಾರವಾಡದ ಬಹುತೇಕ ರಸ್ತೆಯಲ್ಲಿ ಕೇವಲ ಅರ್ಧದಷ್ಟು ರಸ್ತೆ ಮಾತ್ರ ಸಂಚಾರಕ್ಕೆ ಸೂಕ್ತವಾಗಿವೆ. ಇನ್ನರ್ಧದಷ್ಟು ರಸ್ತೆಗಳು ಕಂಟಕವಾಗಿ ಮಾರ್ಪಟ್ಟಿವೆ. ಇನ್ನು ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಮತ್ತು ಇತರೆ ಅಭಿವೃದ್ಧಿ ಕಾರ್ಯಗಳಿಂದಾಗಿ ರಸ್ತೆಗಳು ಬಹಳಷ್ಟು ಹದಗೆಟ್ಟಿವೆ.
ಮಳೆಯಿಂದಾಗಿ ಕಚ್ಚಾ ರಸ್ತೆಗಳು ಕೆಸರಿನಿಂದ ಕೂಡಿದ್ದು, ಕೆಲವೆಡೆ ಜನ ಸಂಚರಿಸಲಾಗದ ಸ್ಥಿತಿ ತಲುಪಿವೆ. ಪರಿಣಾಮ, ಟ್ರಾಫಿಕ್ ಸಮಸ್ಯೆ ಕೂಡಾ ಹೆಚ್ಚಾಗುತ್ತಿದ್ದು, ಪೊಲೀಸರು ಕೂಡಾ ವಾಹನ ನಿಯಂತ್ರಿಸಲು ಹೈರಾಣಾಗುತ್ತಿದ್ದಾರೆ.