ನವಲಗುಂದ: ತಾಲೂಕಿನ ಪಡೇಸೂರ ಗ್ರಾಮದಲ್ಲಿ ಸುರಿದ ಮಹಾಮಳೆಗೆ ಮನೆಯೊಂದು ಕುಸಿದು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಕುಸಿತ ಕಂಡ ಮನೆಯನ್ನು ಪರಿಶೀಲಿಸಿದರು.
ಮಹಾಮಳೆಗೆ ಪಡೇಸೂರ ಗ್ರಾಮದಲ್ಲಿ ಮನೆ ಕುಸಿತ; ಪರಿಹಾರದ ಭರವಸೆ ನೀಡಿದ ಶಾಸಕ - Home fell down due to heavy rain
ಪಡೇಸೂರ ಗ್ರಾಮದಲ್ಲಿ ಸುರಿದ ಮಹಾ ಮಳೆಯಿಂದ ಮನೆಯೊಂದು ಕುಸಿದಿದ್ದು, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಕುಸಿತ ಕಂಡ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಪರಿಹಾರ ಒದಗಿಸುವ ಭರವಸೆ ನೀಡಿದರು.
![ಮಹಾಮಳೆಗೆ ಪಡೇಸೂರ ಗ್ರಾಮದಲ್ಲಿ ಮನೆ ಕುಸಿತ; ಪರಿಹಾರದ ಭರವಸೆ ನೀಡಿದ ಶಾಸಕ Home fell down due to heavy rain](https://etvbharatimages.akamaized.net/etvbharat/prod-images/768-512-09:06:06:1598369766-kn-dwdrural-kac10032-25082020183952-2508f-1598360992-57.jpg)
Home fell down due to heavy rain
ಬಳಿಕ ಕುಟುಂಬಸ್ಥರಿಗೆ ಧೈರ್ಯ ಹೇಳಿದ ಶಾಸಕರು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ತ್ವರಿತ ಗತಿಯಲ್ಲಿ ಪರಿಹಾರ ದೊರಕಿಸಲು ಕ್ರಮ ಕೈಗೊಳ್ಳಲು ಸೂಚಿಸಿದರು. ಈ ವೇಳೆ ಅಧಿಕಾರಿಗಳು, ಪಡೇಸೂರು ಗ್ರಾಮಸ್ಥರು ಇದ್ದರು.