ಹುಬ್ಬಳ್ಳಿ:ಅದು ಭೀಕರ ರಸ್ತೆ ಅಪಘಾತ. ಆ ಅಪಘಾತದಲ್ಲಿ ಅಮಾಯಕ ಯುವಕನೊಬ್ಬ ಜೀವ ಕಳೆದುಕೊಂಡಿದ್ದಾರೆ. ಪ್ರಕರಣ ಸಂಬಂಧ ಸೂಕ್ತ ಸಾಕ್ಷಿಗಳಿದ್ದರೂ ಸಹ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಪ್ರಕರಣದ ವಿವರ:ಕಳೆದ ಭಾನುವಾರ ಉಣಕಲ್ ಸಮೀಪ ಸಿದ್ದೇಶ್ವರ ಸರ್ಕಲ್ನಲ್ಲಿ ಬೆಳಗಿನ ಜಾವ ಸುಮಾರು 2 ಗಂಟೆ ಸುಮಾರಿಗೆ ನಡೆದ ಹಿಟ್ ಆ್ಯಂಡ್ ರನ್ ಕೇಸ್ನಲ್ಲಿ ಯುವಕನೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ವಿದ್ಯಾನಗರದ ಬನಶಂಕರಿ ಬಡಾವಣೆ ನಿವಾಸಿ ಗಣೇಶ ಬಣಗಣ್ಣನವರ್ ಮೃತರು.
ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಪಘಾತದ ನಂತರ ಪ್ರತಿಷ್ಠಿತ ಉದ್ಯಮಿಯ ಮಗ ತನ್ನ ಕಾರು ಬಿಟ್ಟು ಮತ್ತೊಂದು ಕಾರು ಹತ್ತಿ ಪರಾರಿಯಾಗಿದ್ದಾರೆ. ಆದರೂ ದೂರಿನಲ್ಲಿ ಡ್ರೈವರ್ ಎಂದು ಉಲ್ಲೇಖಿಸಿಲಾಗಿದೆ.