ಕರ್ನಾಟಕ

karnataka

ETV Bharat / state

ಧಾರವಾಡದಲ್ಲಿ ಧಾರಾಕಾರ ಮಳೆ: ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಡಿಸಿ‌ ಸೂಚನೆ

ಮುಗಿಯದ ವರುಣನ ಆರ್ಭಟದಿಂದಾಗಿ ಜಿಲ್ಲೆಯ ಹಲವು ಭಾಗಗಳಲ್ಲಿ ಭಾರಿ ಪ್ರಮಾಣದ ನೀರು ಹರಿದು ಬಂದಿದೆ. ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟವುಂಟಾಗಿದೆ. ಪ್ರವಾಹ ಪೀಡಿತ ಸ್ಥಳಗಳಲ್ಲಿ ಸೂಕ್ತ ವ್ಯವಸ್ಥೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

By

Published : Aug 8, 2019, 9:39 PM IST

ಧಾರವಾಡದಲ್ಲಿ ಧಾರಾಕಾರ ಮಳೆ: ಸೂಕ್ತ ವ್ಯವಸ್ಥೆ ಮಾಡುವಂತೆ ಡಿಸಿ‌ ಸೂಚನೆ

ಧಾರವಾಡ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆ ಜನರನ್ನು ಕಂಗಾಲಾಗಿಸಿದೆ. ಈದುವರೆಗೆ ಒಟ್ಟು 3 ಜನ ಸಾವಿಗೀಡಾಗಿದ್ದಾರೆ. ಅತಿವೃಷ್ಠಿಯಿಂದ ಬಾಧಿತರಾಗಿರುವ ಜನರಿಗೆ ಜಿಲ್ಲೆಯಾದ್ಯಂತ ಒಟ್ಟು 71 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿ 7650 ಕುಟುಂಬಗಳಿಗೆ ಸೇರಿದ 27,699 ಜನರನ್ನು ಸ್ಥಳಾಂತರಿಸಲಾಗಿದೆ.

ಧಾರವಾಡದಲ್ಲಿ ಧಾರಾಕಾರ ಮಳೆ: ಸೂಕ್ತ ವ್ಯವಸ್ಥೆ ಮಾಡುವಂತೆ ಡಿಸಿ‌ ಸೂಚನೆ

ವಾಡಿಕೆಯಾಗಿ ಆಗಸ್ಟ್ 1 ರಿಂದ 7ರ ವರೆಗೆ 107.42 ಮಿಲಿ ಮೀಟರ್ ಮಳೆಯಾಗಬೇಕಾಗಿತ್ತು, ಆದರೆ ಜಿಲ್ಲೆಯಾದ್ಯಾಂತ 154.6 ಮಿಲಿ ಮೀಟರ್ ಮಳೆಯಾಗಿದೆ. ಈ ಪೈಕಿ ಧಾರವಾಡ, ಹುಬ್ಬಳ್ಳಿ ಹಾಗೂ ಕಲಘಟಗಿ ತಾಲೂಕುಗಳಲ್ಲಿ ಅತ್ಯಧಿಕ ಮಳೆ ಸುರಿದಿದೆ.

ಕುಂದಗೋಳ ತಾಲೂಕಿನ ಬರದ್ವಾಡ ಗ್ರಾಮದ ಕಾಶಯ್ಯ ಮಹದೇವಯ್ಯ ಹೊಸಳ್ಳಿಮಠ (57), ಹುಬ್ಬಳ್ಳಿ ತಾಲೂಕು ಗಾಮಗಟ್ಟಿಯ ಚನ್ನವ್ವ ಕೋಂ. ರಮೇಶ ವಾಲಿಕಾರ (45) ಹಾಗೂ ಧಾರವಾಡ ತಾಲೂಕಿನ ಮುರಕಟ್ಟಿಯಲ್ಲಿ ಹಳಿಯಾಳ ತಾಲೂಕಿನ ಲಕ್ಷ್ಮೀಕೇರಿಯ ಮಹ್ಮದ್ ಜಮೀಲ್ ತಂದೆ ಮಕ್ತುಮಸಾಬ್ ನದಾಫ್ (36) ಎಂಬುವರು ಮೃತಪಟ್ಟಿದ್ದಾರೆ.

ಪರಿಹಾರ ಕೇಂದ್ರಗಳ ವಿವರ :

ಧಾರವಾಡ ತಾಲೂಕು: ಸಪ್ತಾಪೂರದ ಭಾವಿಕಟ್ಟಿ ಪ್ಲಾಟ್, ತಡಸಿನಕೊಪ್ಪದ ಸಮುದಾಯ ಭವನ, ರಾಜೀವ್​ ಗಾಂಧಿ ನಗರ, ಹಾರೋಬೆಳವಡಿ, ಕಬ್ಬೆನೂರ ಹಾಗೂ ಕಲ್ಲೆ ಗ್ರಾಮ.

ಅಳ್ನಾವರ ತಾಲೂಕು: ಉಮಾಭವನ, ಬಿಸಿಎಂ ಹಾಸ್ಟೆಲ್,

ಹುಬ್ಬಳ್ಳಿ ನಗರ ತಾಲೂಕು:ಗಾಮನಗಟ್ಟಿ,

ಹುಬ್ಬಳ್ಳಿ ಗ್ರಾಮೀಣ ತಾಲೂಕು: ಕಿರೇಸೂರ, ಹೆಬಸೂರ, ಭಂಡಿವಾಡ, ಶಿರಗುಪ್ಪಿ-2, ಮಂಟೂರ, ಇಂಗಳಹಳ್ಳಿ, ಉಮಚಗಿ.

ನವಲಗುಂದ ತಾಲೂಕು:ಹನಸಿ, ಶಿರಕೋಳ, ಮೊರಬ, ಶಿರೂರ, ಆಹೆಟ್ಟಿ, ಗುಮ್ಮಗೋಳ, ಬ್ಯಾಲ್ಯಾಳ, ಅಳಗವಾಡಿ, ತಿರ್ಲಾಪುರ, ಜಾವೂರ, ಬಳ್ಳೂರ, ಆರೇಕುರಟ್ಟಿ, ನವಲಗುಂದ, ಕಾಲವಾಡ, ಪಡೇಸೂರ, ಶ್ಯಾನವಾಡ, ಗೊಬ್ಬರಗುಂಪಿ, ಯಮನೂರ, ಕೊಂಗವಾಡ, ಹೆಬ್ಬಾಳ

ಅಣ್ಣಿಗೇರಿ ತಾಲೂಕು: ಶಿಶ್ವಿನಹಳ್ಳಿ, ನಾಗರಹಳ್ಳಿ,

ಕುಂದಗೋಳ ತಾಲೂಕು: ಹರ್ಲಾಪುರ, ಹಂಚಿನಾಳ, ಸಂಶಿ, ಬೆಟದೂರ, ಶಿರೂರ, ಹಿರೇಹರಕುಣಿ, ಭರದ್ವಾಡ, ಚಾಕಲಬ್ಬಿ, ಯರಗುಪ್ಪಿ, ಬಾಗವಾಡ, ಕಡಪಟ್ಟಿ, ಅಲ್ಲಾಪೂರ, ಕುಂದಗೋಳ, ಹೊಸಳ್ಳಿ, ದ್ಯಾವನೂರ, ಬಿಳೇಬಾಳ.

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿ: ಅವಳಿನಗರದ ವಿವಿಧ ಪ್ರದೇಶಗಳಲ್ಲಿ ಒಟ್ಟು 16 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಸಹಾಯವಾಣಿ ಸಂಪರ್ಕಿಸಿ ನೆರವು ಪಡೆಯಿರಿ:

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸಂತ್ರಸ್ತರಾಗಿರುವವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಸಹಾಯವಾಣಿ ಸಂಖ್ಯೆ 9480230962 ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಬಹುದು. ಅಥವಾ 1077 ಉಚಿತ ಸಹಾಯವಾಣಿಗೆ ಕರೆಮಾಡಿ ಮಾಹಿತಿ ನೀಡಬಹುದು. ವಿದ್ಯುತ್‌ಗೆ ಸಂಬಂಧಿಸಿದ ದೂರುಗಳಿಗೆ ಹೆಸ್ಕಾಂ ಸಹಾಯವಾಣಿ ಸಂಖ್ಯೆ 1912ಗೆ ಕರೆಮಾಡಿ ಮಾಹಿತಿ ನೀಡಬಹುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ. ದಿನದ 24 ಗಂಟೆಗಳ ಕಾಲ ಕರೆ ಸ್ವೀಕರಿಸಿ, ಸಮನ್ವಯ ಮಾಡಲು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಸರದಿಯಲ್ಲಿ ನಿಯೋಜಿಸಲಾಗಿದೆ.

ABOUT THE AUTHOR

...view details