ಹುಬ್ಬಳ್ಳಿ:ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಭಕ್ತಾದಿಗಳು ವಾಹನದ ಮೂಲಕ ಹೋಗುವುದು ಸರ್ವೆ ಸಾಮಾನ್ಯ. ಆದರೆ ಇಲ್ಲೊಬ್ಬ ಅಯ್ಯಪ್ಪ ಭಕ್ತ ಸತತ ಮೂರು ವರ್ಷಗಳಿಂದ ಪಾದಯಾತ್ರೆಯಲ್ಲಿಯೇ ಅಯ್ಯಪ್ಪ ಸ್ವಾಮಿ ದರ್ಶನ ಮಾಡುತ್ತಿದ್ದಾರೆ.
ಮೂರು ವರ್ಷಗಳಿಂದ ಕಾಲ್ನಡಿಗೆಯಲ್ಲೇ ಅಯ್ಯಪ್ಪನ ದರ್ಶನ..! - ಹುಬ್ಬಳ್ಳಿಯಿಂದ ಶಬರಿಮಲೆಗೆ ಭಕ್ತನ ಪಾದಯಾತ್ರೆ ಲೇಟೆಸ್ಟ್ ಸುದ್ದಿ
ಹುಬ್ಬಳ್ಳಿಯ ಅಯ್ಯಪ್ಪ ಸ್ವಾಮಿಯ ಭಕ್ತರೊಬ್ಬರು ಸತತ ಮೂರು ವರ್ಷಗಳಿಂದ ಕಾಲ್ನಡಿಗೆಯಲ್ಲೇ ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನ ಪಡೆಯುತ್ತಿದ್ದಾರೆ.
![ಮೂರು ವರ್ಷಗಳಿಂದ ಕಾಲ್ನಡಿಗೆಯಲ್ಲೇ ಅಯ್ಯಪ್ಪನ ದರ್ಶನ..! ayyappa](https://etvbharatimages.akamaized.net/etvbharat/prod-images/768-512-5539514-thumbnail-3x2-surya.jpg)
ಕಾಲ್ನಡಿಗೆಯಲ್ಲೇ ಶಬರಿಮಲೆ ಯಾತ್ರೆ.!
ಕಾಲ್ನಡಿಗೆಯಲ್ಲೇ ಶಬರಿಮಲೆ ಯಾತ್ರೆ.!
ಹುಬ್ಬಳ್ಳಿಯ ಅರಳಿಕಟ್ಟಿ ಓಣಿಯ ನಿವಾಸಿ ಪ್ರೇಮ್ ಚನ್ನಾಪುರ ಎಂಬುವವರೇ ತಮ್ಮ ಭಕ್ತಿಯನ್ನು ಅಯ್ಯಪ್ಪ ಸ್ವಾಮಿಗೆ ಸಮರ್ಪಿಸುವ ಹಿನ್ನೆಲೆ ಸತತ ಮೂರು ವರ್ಷಗಳಿಂದ ಪಾದಯಾತ್ರೆ ಮೂಲಕವೇ ಶಬರಿಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಮಾಡುತ್ತಿದ್ದಾರೆ.
ಗಾಳಿ, ಬಿಸಿಲು ಲೆಕ್ಕಿಸದೇ ಹಗಲು ರಾತ್ರಿ ಎನ್ನದೇ ಪಾದಯಾತ್ರೆ ಮಾಡಿ ಅಯ್ಯಪ್ಪ ಸ್ವಾಮಿಯನ್ನು ಕಾಣುವ ಕಾತುರದಿಂದ ಶಬರಿಮಲೆ ಯಾತ್ರೆಗೆ ಕಾಲ್ನಡಿಗೆಯಲ್ಲಿ ತೆರಳಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯುತ್ತಿರುವುದು ವಿಶೇಷವಾಗಿದೆ.